ಚಾಮರಾಜನಗರ : ಪ್ರತಿವರ್ಷದಂತೆ ಈ ಬಾರಿಯು ನಗರದಲ್ಲಿ ದಸರಾ ಆಚರಣೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಭುವನೇಶ್ವರಿ ವೃತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ-209 ರಲ್ಲಿ ವಾಹನ ಸಂಚಾರ ತಡೆದು, ರಾಜ್ಯ ಸರ್ಕಾರ, ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಚಾಮರಾಜನಗರದಲ್ಲಿ ದಸರಾ ನಡೆಯಲ್ಲ. ಅಲ್ಲಿ ದಸರಾ ಏಕೆ ಮಾಡಬೇಕು. ಇಲ್ಲಿ ರಾಜರು, ಮಹಾರಾಜರು ಇದ್ದರೆ ಎಂದು ಹೇಳಿರುವುದು ಅತ್ಯಂತ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಾಲದಿಂದಲ್ಲೂ ಚಾಮರಾಜನಗರದಲ್ಲಿ ದಸರಾ ನಡೆಯುತ್ತಿದ್ದು, ಚಾಮರಾಜನಗರ ರಾಜರ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿದೆ. ಇಲ್ಲಿ 10ನೇ ಜಯಚಾಮರಾಜ ಒಡೆಯರ್ ಜನಿಸಿದರು. ಆದರಿಂದ ಇಲ್ಲಿ ಜನನ ಮಂಟಪ ಉದ್ಭವವಾಯಿತು. ಅವರ ಮಗ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ತಂದೆಯ ನೆನಪಿಗಾಗಿ ಹರಿಕೊಠಾರ ಅಂತಿದ್ದ ಹೆಸರನ್ನು ಚಾಮರಾಜನಗರ ಎಂದು ನಾಮಕರಣ ಮಾಡಿ ಶ್ರೀಚಾಮರಾಜೇಶ್ವರ ಸ್ವಾಮಿ ದೇವಾಲಯ ನಿರ್ಮಾಣ ಮಾಡಿದರು. ಇಲ್ಲಿ ರಾಜರು, ಮಹಾರಾಜರು ಇದ್ದುದ್ದರಿಂದಲೇ ಚಾಮರಾಜನಗರ ಎಂದು ಕರೆಯುತ್ತಾರೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಇದರ ಮಾಹಿತಿ ಗೊತ್ತಾಗಲಿಲ್ಲವೇ ಎಂದು ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆಯಲ್ಲಿ ಶ್ರೀನಿವಾಸಗೌಡ, ಪಣ್ಯದಹುಂಡಿ ರಾಜು, ನಿಜಧ್ವನಿಗೋವಿಂದರಾಜು, ಮಹೇಶ್ ಗೌಡ, ಸುರೇಶ್ ವಾಜಪೇಯಿ, ತಾಂಡವಮೂರ್ತಿ, ಮುತ್ತಿಗೆ ಗೋವಿಂದರಾಜು, ಸಿ.ಎಂ.ನರಸಿಂಹಮೂರ್ತಿ, ರವಿಚಂದ್ರಪ್ರಸಾದ್ ಕಹಳೆ, ಲಿಂಗರಾಜು, ರೈತ ಮುಖಂಡ ನಾಗರಾಜು, ಸಾಗರ್ ರಾವತ್, ಲೋಕೇಶ್, ಚಾ.ಸಿ.ಸಿದ್ದರಾಜು, ಮೂಡ್ಲು ಪುರ ಪ್ರಕಾಶ್, ಶಿವು, ಶಾಂತರಾಜು, ಅರುಣ್ ಕುಮಾರ್ ಗೌಡ, ಸುಬ್ರಹ್ಮಣ್ಯ, ಡ್ಯಾನ್ಸ ಬಸವರಾಜು ಇದ್ದರು.
PublicNext
30/06/2025 04:14 pm