ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಸುರ್ಜೆವಾಲಾ ಒನ್ ಟು ಒನ್ ಸಭೆ ಮಾಡ್ತಿರುವುದು ಒಳ್ಳೆಯ ವಿಚಾರ : ಶಾಸಕ ಕೊತ್ತೂರು ಮಂಜುನಾಥ್

ಕೋಲಾರ - ಕಾಂಗ್ರೆಸ್ ಪಕ್ಷದ ಉಸ್ತುವಾರಿಗಳಾದ ಸುರ್ಜೆವಾಲ ಅವರು ಸಭೆಗೆ ಆಹ್ವಾನಿಸಿದ್ದಾರೆ. ಸಭೆಯ ವಿಚಾರ ಏನೂ ಅಂತ ಗೊತ್ತಿಲ್ಲ ಮೀಟಿಂಗ್‌ಗೆ ಹೋಗ್ತಿದ್ದೆನೆ ಎಂದು ಕೋಲಾರ ಶಾಸಕ ಡಾ. ಜಿ. ಕೊತ್ತೂರು ಮಂಜುನಾಥ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋಲಾರ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಯಾವುದೇ ದೂರುಗಳಿಲ್ಲ ಎಲ್ಲವೂ ಸರಿಯಾಗಿದೆ. ಕೇಳಿರುವ ಅನುಧಾನವನ್ನು‌ ಕೊಟ್ಟಿದ್ದಾರೆ. ಯಾರ ಮೇಲೆ ಏನು ದೂರುಗಳಿಲ್ಲ ಅದನ್ನೆ ಹೋಗಿ ಸುರ್ಜೆವಾಲ ಅವರಿಗೆ ತಿಳಿಸುತ್ತೆನೆ ಎಂದು ಹೇಳಿದರು.

ನನಗೆ ಎಲ್ಲಾ ಸಚಿವರು ಸ್ಪಂದಿಸುತ್ತಿದ್ದಾರೆ. ಒನ್ ಟು ಒನ್ ಸಭೆ ಮಾಡ್ತಿರುವುದು ತುಂಬಾ ಒಳ್ಳೆಯದು ಕಷ್ಟ ಸುಖ ಎಲ್ಲವನ್ನು ಹೇಳಿಕೊಳ್ಳಬಹುದು ಇದು ಒಂದು ಒಳ್ಳೆಯ ಅವಕಾಶ ಎಂದರು.

Edited By : Shivu K
PublicNext

PublicNext

30/06/2025 07:16 pm

Cinque Terre

12.45 K

Cinque Terre

0