ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಈ ಅಕ್ರಮ ಸಂಬಂಧದ ವಿಚಾರದಲ್ಲಿ ಬಹಳಷ್ಟು ತಲೆಗಳೇ ಉರುಳುತ್ತಿವೆ. ತೀರಾ ಇತ್ತೀಚಿಗಷ್ಟೇ, ಶಿವಮೊಗ್ಗ ನಗರದ ಬೊಮ್ಮಕಟ್ಟೆ ಬಳಿ ರೌಡಿಶೀಟರ್ ಓರ್ವನ ಭೀಕರ ಹತ್ಯೆಯಾಗಿತ್ತು. ಈ ಘಟನೆ ಜನಮಾನಸದಿಂದ ಮಾಸುವೇ ಮುನ್ನವೇ ಶಿವಮೊಗ್ಗ ಮತ್ತೋಂದು ಅಂತಹದ್ದೆ ಭೀಕರ ಘಟನೆಗೆ ಸಾಕ್ಷಿಯಾಗಿದೆ. ಬೇಡ..., ಬಿಟ್ಟು ಬಿಡು ಎಂದು ಹಲವು ಬಾರಿ ವಾರ್ನಿಂಗ್ ನೀಡಿದ್ರೂ.., ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ, ಮಕ್ಕಳ ಕೈಯಲ್ಲೇ ವ್ಯಕ್ತಿಯೊಬ್ಬ ಮಟಾಶ್ ಆಗಿ ಹೋಗಿದ್ದಾನೆ.
ಅಕ್ರಮ ಸಂಬಂಧದ ಸಂಕೋಲೆಗೆ ಶಿವಮೊಗ್ಗದಲ್ಲಿ ಮತ್ತೋಂದು ಜೀವ ಹಾರಿಹೋಗಿದೆ. ಕುಂಸಿ ಗ್ರಾಮದಲ್ಲಿ ವಸಂತ ಎಂಬ ವ್ಯಕ್ತಿಯನ್ನ ಭಾನುವಾರ ರಾತ್ರಿ ಭೀಕರವಾಗಿ ಕೊಲೆ ಮಾಡಲಾಗಿದೆ. ಕುಂಸಿ ಗ್ರಾಮದ ಚಿಕ್ಕಮರಸ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಕುಂಸಿ ನಿವಾಸಿ 32 ವರ್ಷದ ವಸಂತ್ @ ವಾಸು ಕೊಲೆಯಾದ ವ್ಯಕ್ತಿಯಾಗಿದ್ದು, ಈ ಕೊಲೆಗೆ ಅಕ್ರಮ ಸಂಬಂಧವೇ ಕಾರಣ ಎನ್ನಲಾಗುತ್ತಿದೆ. ವಸಂತ್ ನನ್ನ ಅಟ್ಟಾಡಿಸಿ, ತಲೆ ಹಾಗೂ ಕೈಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಇನ್ನೂ ವಸಂತ್ ಒಳ್ಳೆಯ ವ್ಯಕ್ತಿಯಾಗಿದ್ದ, ಗ್ರಾಮದಲ್ಲಿ. ಕಾರ್ಪೆಂಟರ್ ವೃತ್ತಿ ಮಾಡಿಕೊಂಡಿದ್ದ ವಸಂತ್ ಸಾವಿಗೆ ನ್ಯಾಯ ಸಿಗಬೇಕು ಅನ್ನುತ್ತಾರೆ ಸ್ಥಳೀಯರು.
ಇನ್ನು ಹಲ್ಲೆಯ ತೀವ್ರತೆಗೆ ಸ್ಥಳದಲ್ಲೇ ಮೃತಪಟ್ಟಿರುವ ವಸಂತ ಭಾನುವಾರ ಕುಡಿದು ಬಂದಿದ್ದ ಎನ್ನಲಾಗುತ್ತಿದೆ. ಅಷ್ಟಕ್ಕೂ, ಈ ಕೊಲೆ ಮಾಡಿರುವ ಇಬ್ಬರು ಆರೋಪಿಗಳ ತಾಯಿ ಜೊತೆಗೆ ಈ ವಸಂತನ ಅತಿಯಾದ ಸಲುಗೆಯೇ ಮಟಾಶ್ ಗೆ ಕಾರಣ ಎನ್ನಲಾಗುತ್ತಿದೆ. ಕೊಲೆ ಆರೋಪಿಗಳ ತಂದೆ ಮೃತ ಮಲ್ಲೇಶಪ್ಪನಿಗೆ ಆತ್ಮೀಯನಾಗಿದ್ದ ವಸಂತ, ಮಲ್ಲೇಶಪ್ಪನ ಪತ್ನಿಯ ಜೊತೆಗೆ ಸಲುಗೆಯಿಂದ ಇದ್ದದ್ದೆ ಕೊಲೆಗೆ ಕಾರಣವಾಗಿದೆ. ಇದೀಗ ಆರೋಪಿಗಳಾದ ಹರೀಶ ಹಾಗೂ ಆಕಾಶ್ ನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಎರಡು ಪ್ರತ್ಯೇಕ ತಂಡವನ್ನ ಸಹ ಮಾಡಲಾಗಿದೆ.
ಒಟ್ಟಾರೆ, ಶಿವಮೊಗ್ಗ ಬೊಮ್ಮನಕಟ್ಟೆ ಕೊಲೆ ಘಟನೆ ಮಾಸುವ ಮುನ್ನವೇ ಕುಂಸಿ ಗ್ರಾಮದಲ್ಲಿ ನಡೆದ ಈ ಭೀಕರ ಕೊಲೆ ಜನರನ್ನು ಆತಂಕಗೊಳಿಸಿದ್ದು, ಪೊಲೀಸ್ ಇಲಾಖೆ ತಕ್ಷಣವೇ ಆರೋಪಿಗಳನ್ನು ಬಂಧಿಸಿ, ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕಿದೆ.
ವೀರೇಶ್ ಜಿ ಹೊಸೂರು, ಪಬ್ಲಿಕ್ ನೆಕ್ಸ್ಟ್. ಶಿವಮೊಗ್ಗ...
PublicNext
30/06/2025 08:51 pm