ಕೋಲಾರ : ಸಿಎಂ ದಸರಾ ಉದ್ಘಾಟನೆ ಮಾಡಲ್ಲ ಅಂತ ಆರ್.ಅಶೋಕ್ ಹೇಳಿಕೆಗೆ ಆಗಾದ್ರೆ ಅಶೋಕ್ ಉದ್ಘಾಟನೆ ಮಾಡ್ತಾರ ಎಂದು ಉಸ್ತುವಾರಿ ಸಚಿವ ಭೈರತಿ ಸುರೇಶ್ ಟಾಂಗ್ ಕೊಟ್ಟಿದ್ದಾರೆ.
ಕೋಲಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶೋಕ್, ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಯಾವಾಗ ಆದ್ರೂ, ಮೊದಲು ಅವರ ತಟ್ಟೆಯಲ್ಲಿರುವ ಹೆಗ್ಗಣ ಹೊರ ಹಾಕಲಿ. ನೊಣ ಹುಡ್ಕೊಂಡು ಓಡಾಡುವ ಅವಶ್ಯಕತೆ ಇಲ್ಲ, ಬಿಜೆಪಿ ಪಕ್ಷದಲ್ಲಿ ಅಧ್ಯಕ್ಷರು, ಪದಾಧಿಕಾರಿಗಳು ಬದಲಾವಣೆ ಆಗ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ MLA ಗಳಿಗೆ ಸರ್ಕಾರ ಅನುದಾನ ನೀಡ್ತಿಲ್ಲ, ಕಾನೂನು ಹೋರಾಟ ಮಾಡ್ತೀವಿ ಅನ್ನೋ ಹೇಳಿಕೆಗೆ ಕಾನೂನು ಹೋರಾಟ ಮಾಡಿ ಅನುದಾನ ಪಡೆಯಲಿ, ಯಾರು ಬೇಡ ಅಂದಿದ್ದು. ಗ್ಯಾರಂಟಿ ಯೋಜನೆಗಳು ಅವರ ಕ್ಷೇತ್ರಕ್ಕೆ ಸೇರ್ತಿಲ್ವಾ ? JDS MLA ಅಂತ ಯೋಜನೆಗಳು ಕೊಡದೆ ಇದೀವಾ ? ಸಿದ್ದರಾಮಯ್ಯ ನೀಡುವ ಹಣ ಎಲ್ಲರಿಗೂ ಸಮಬಾಳು, ಸಮಪಾಲು ಎಂದು ಹೇಳಿದರು.
ಬೈಟ್ : ಸಚಿವ ಭೈರತಿ ಸುರೇಶ್
PublicNext
30/06/2025 09:48 pm