ಹಾವೇರಿ: ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜದ ಮಧ್ಯೆ ಇದೀಗ ನಕಲಿ ರಸಗೊಬ್ಬರ ಹಾವಳಿ ಶುರುವಾಗಿದೆ. ಉತ್ತಮ ಮುಂಗಾರು ಮಳೆ ಸುರಿಯುತ್ತಿದ್ದಂತೆ ಡಿಎಪಿ ಗೊಬ್ಬರ ಅಭಾವ ತಲೆದೋರಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಸ್ಥರು ಕಳಪೆ ಡಿಎಪಿ ಗೊಬ್ಬರ ಮಾರಾಟ ಮಾಡಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ ಸುಮಾರು 28ಕ್ಕೂ ಅಧಿಕ ರೈತರು ಗ್ರಾಮದ ಎರಡು ಅಂಗಡಿಗಳಲ್ಲಿ ರಸಗೊಬ್ಬರ ಖರೀದಿಸಿದ್ದರು. ಮಾಸನಕಟ್ಟಿ, ದ್ಯಾಮನಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಸಹ ಡಿಎಪಿ ಗೊಬ್ಬರ ಖರೀದಿಸಿದ್ದಾರೆ.
ರೈತರು ವರ್ತಕರ ಬಳಿ 1,400 ರುಪಾಯಿ ಕೊಟ್ಟು 50 ಕೆಜಿ ಡಿಎಪಿ ಗೊಬ್ಬರ ಖರೀದಿ ಮಾಡಿ ಬಿತ್ತನೆ ಮಾಡಿದ್ದಾರೆ. ಅದರೆ ಬಿತ್ತನೆ ಮಾಡಿ ಒಂದು ತಿಂಗಳು ಕಳೆದರೂ ಮೆಕ್ಕೆಜೋಳ ಸರಿಯಾಗಿ ಬೆಳೆದಿಲ್ಲ. ಇದಕ್ಕೆ ಕಳಪೆ ರಸಗೊಬ್ಬರ ಕಾರಣ ಎಂದು ರೈತರು ಆರೋಪಿಸಿದ್ದಾರೆ.
PublicNext
30/06/2025 10:27 pm