ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಜುಲೈ 3 ರಂದು ರಿಪ್ಪನ್‌ಪೇಟೆಯಲ್ಲಿ ಸೌಹಾರ್ಧ ನಡಿಗೆ ಕಾರ್ಯಕ್ರಮ

ಶಿವಮೊಗ್ಗ : ಮನುಷ್ಯ ಮನಸ್ಸುಗಳನ್ನು ಬೆಸೆಯುವ ಹಿನ್ನಲೆಯಲ್ಲಿ ಸುನ್ನಿ ಸ್ಟೂಡೆಂಟ್ ಫೆಡರೇಷನ್ ವತಿಯಿಂದ ಜುಲೈ 3 ರಂದು ಬೆಳಿಗ್ಗೆ 10 ಗಂಟೆಗೆ ರಿಪ್ಪನ್‌ಪೇಟೆಯಲ್ಲಿ ಸೌಹಾರ್ಧ ನಡಿಗೆ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಎಸ್‌ಎಸ್‌ಎಫ್‌ನ ಜಿಲ್ಲಾಧ್ಯಕ್ಷ ಡಿ.ಎ.ಹಸನ್ ಸಖಾಫಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತದಂತಹ ಪ್ರಜಾ ಪ್ರಭುತ್ವ ದೇಶದಲ್ಲಿ ತಲ್ಲಣಗಳು ತಲೆದೋರುತ್ತಿವೆ. ಶೋಚನೀಯ ಪರಿಸ್ಥಿತಿ ಉಂಟಾಗಿದೆ. ದೇಶದ ಉದ್ದಕ್ಕೂ ದ್ವೇಷ ಭಾಷಣಗಳು ಕೇಳಿ ಬರುತ್ತಿವೆ. ಧರ್ಮ-ಜಾತಿಗಳ ನಡುವೆ ಕಚ್ಚಾಡುವಂತೆ ಮಾಡಲಾಗುತ್ತದೆ. ರಾಜಕೀಯ ಪ್ರೇರಿತ ಹಿತಾಸಕ್ತಿಗಳಿಗೆ ಯುವಕರು ಬಲಿಯಾಗುತ್ತಿದ್ದಾರೆ. ಇದು ಕೊನೆಗೊಳ್ಳಬೇಕು. ಸ್ನೇಹ ಸೇತುವೆ ಗಟ್ಟಿಗೊಳ್ಳಬೇಕು. ಈ ಹಿನ್ನಲೆಯಲ್ಲಿ ಎಸ್‌ಎಸ್‌ಎಫ್ ಸಂಘಟನೆ ಅಸ್ಥಿತ್ವಕ್ಕೆ ಬಂದಿದ್ದು, ಜೂನ್ 22ರಿಂದ ಜುಲೈ 4ರ ವರೆಗೆ ರಾಜ್ಯದ ಪ್ರಮುಖ 24 ಪಟ್ಟಣಗಳಲ್ಲಿ ‘ಸೌಹಾರ್ಧ ನಡಿಗೆ’ ಎಂಬ ಕಾರ್ಯಕ್ರಮವನ್ನು ಹಮಿಕೊಂಡಿದೆ ಎಂದರು.

Edited By : PublicNext Desk
Kshetra Samachara

Kshetra Samachara

30/06/2025 10:49 pm

Cinque Terre

460

Cinque Terre

0