ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ವೈದ್ಯರ ವರ್ಗಾವಣೆ- ದಿಢೀ‌ರ್ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ

ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣದ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರು ಜನ ಪ್ರಮುಖ ವೈದ್ಯರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಹೀಗಾಗಿ ಶಾಸಕ ಆರಗ ಜ್ಞಾನೇಂದ್ರರವರು ಸೋಮವಾರ ಜೆಸಿ ಆಸ್ಪತ್ರೆಗೆ ದಿಢೀ‌ರ್ ಭೇಟಿ ನೀಡಿ ಮಾಹಿತಿ ಪಡೆದರು.

ಆಸ್ಪತ್ರೆಯಿಂದಲೇ ಆರೋಗ್ಯ ಇಲಾಖೆ ಕಮಿಷನ‌ರ್ ಹರ್ಷಗುಪ್ತರವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಈ ಕೂಡಲೇ ಯಾವುದೇ ವರ್ಗಾವಣೆ ಕ್ರಮ ಕೈಗೊಳ್ಳದಂತೆ ತಿಳಿಸಿ, ನರ್ಸ್ ಕೂಡ ಕಡಿಮೆ ಇದ್ದಾರೆ. ಇದ್ದ ನಾಲ್ವರು ಹಿರಿಯ ನರ್ಸ್ ಗಳು ವರ್ಗಾವಣೆಯಾದರೆ ಆಸ್ಪತ್ರೆಯಲ್ಲಿ ಕೆಲಸ ಮಾಡುವವರು ಯಾರು? ವರ್ಗಾವಣೆ ಮಾಡುವುದರ ಬಗ್ಗೆ ನನ್ನ ಅಭ್ಯಂತರ ಇಲ್ಲ. ಆದರೆ, ಆ ಜಾಗಕ್ಕೆ ಹಿರಿಯ ಅನುಭವಿ ನರ್ಸ್ ಗಳು ಸಿಗುವುದಿಲ್ಲ.

ವೈದ್ಯರು ಸರ್ಜರಿ ಮಾಡಲು ಹೆದರುವ ಸಂಭವವಿದೆ. ಇತ್ತೀಚಿಗೆ ರಾಜ್ಯದಲ್ಲಿ ಬಾಣಂತಿಯರ ಸಾವು ಜಾಸ್ತಿಯಾಗುತ್ತಿದೆ. ಈ ರೀತಿ ಏಕಾಏಕಿ ವರ್ಗಾವಣೆ ಮಾಡಿದರೆ ಇನ್ನು ಜಾಸ್ತಿ ಆಗುತ್ತದೆ ಎಂದರು. ತಿಂಗಳಿಗೆ ನೂರು ಡೆಲಿವರಿ ನಡೆಯುತ್ತಿದೆ. ನಿಮ್ಮ ವರ್ಗಾವಣೆ ಆದೇಶದಲ್ಲಿ ಅರವಳಿಕೆ ತಜ್ಞರನ್ನು ವರ್ಗಾವಣೆ ಮಾಡಲು ತಿಳಿಸಿದೆ. ಅವರು ವರ್ಗಾವಣೆಗೊಂಡರೆ ಡೆಲಿವರಿ ಮಾಡಲು ಸಹ ಆಗುವುದಿಲ್ಲ. ನೀವು ಈ ರೀತಿ ವೈದ್ಯರನ್ನು ವರ್ಗಾವಣೆ ಮಾಡಿದರೆ ಬಡವರಿಗೆ ಚಿಕಿತ್ಸೆ ಸಿಗುವುದಿಲ್ಲ. ನರ್ಸಿಂಗ್ ಹೋಂ ಹೋದರೆ ಹತ್ತಾರು ಸಾವಿರ ಹಣ ವ್ಯಯಿಸಬೇಕು. ಬೇರೆ ವೈದ್ಯರು, ನರ್ಸ್ ಗಳು ಈ ಆಸ್ಪತ್ರೆಗೆ ಬರುವ ತನಕ ಈಗ ಇರುವ ಯಾವುದೇ ವೈದ್ಯರನ್ನು, ನರ್ಸ್ ಗಳನ್ನು ವರ್ಗಾವಣೆ ಮಾಡಬಾರದು ಎಂದು ಹೇಳಿದರು.

Edited By : Shivu K
PublicNext

PublicNext

30/06/2025 10:58 pm

Cinque Terre

4.78 K

Cinque Terre

0