", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/387839-1752747936-Untitled-design---2025-07-17T155933.336.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮ ರಾಜ್ಯ ಸರ್ಕಾರ ವರ್ಸಸ್ ಕೇಂದ್ರ ಸರ್ಕಾರ ಅನ್ನೋ ರೀತಿ...Read more" } ", "keywords": "- Sigandur bridge inauguration - CM snubbed by Yediyurappa - Yatnal's allegations - Bengaluru bridge project - Political rivalry in Karnataka", "url": "https://dashboard.publicnext.com/node" }
ಬೆಂಗಳೂರು : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮ ರಾಜ್ಯ ಸರ್ಕಾರ ವರ್ಸಸ್ ಕೇಂದ್ರ ಸರ್ಕಾರ ಅನ್ನೋ ರೀತಿ ಜಟಾಪಟಿ ನಡೆದಿತ್ತು.
ಶಿಷ್ಟಾಚಾರ ಉಲ್ಲಂಘನೆ ಮಾಡಿದೆ ಕೇಂದ್ರ ಸರ್ಕಾರ ಎಂದು ಕಾರ್ಯಕ್ರಮಕ್ಕೆ ಸಿಎಂ ಸೇರಿದಂತೆ ಸಚಿವರು ಕಾಂಗ್ರೆಸ್ ಶಾಸಕರ್ಯಾರು ಹೋಗಿರಲಿಲ್ಲ. ಆದ್ರೆ ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂಗೆ ಬರಬೇಡ ಅಂತ ಹೇಳಿದ್ದೇ ಯಡಿಯೂರಪ್ಪ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ನೀವು ಬರಬೇಡಿ, ನಿಮ್ಮ ಸಚಿವರೂ ಬರೋದು ಬೇಡ ಅಂತ ಸಿದ್ದರಾಮಯ್ಯಗೆ ಹೇಳಿದ್ರು ಯಾಕಂದ್ರೆ ಕೇಂದ್ರಕ್ಕೆ ಸಂದೇಶ ರವಾನೆ ಮಾಡಲು. ನಮ್ಮ ನಡುವೆ ಯಾವುದೇ ಅಜೆಸ್ಟ್ಮೆಂಟ್ ಇಲ್ಲ ಅಂತ ಹೇಳಲು ಈ ರೀತಿ ಹೇಳಿದ್ದಾರೆ, ತಮ್ಮ ಮಗನನ್ನ ಮತ್ತೆ ರಾಜ್ಯಾಧ್ಯಕ್ಷ ಮಾಡಲು ಈ ಪ್ಲಾನ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಆಡಳಿತ ಪಕ್ಷದ ಜೊತೆ ಬಿಜೆಪಿ ವಿರೋಧ ಇದೆ ಅಂತ ತೋರಿಸಿಕೊಳ್ಳಬೇಕು ಹೀಗಾಗಿಯೇ ಸಿಎಂ ಅವರನ್ನ ಕಾರ್ಯಕ್ರಮಕ್ಕೆ ಬರೋದನ್ನ ತಡೆದಿದ್ದಾರೆ ಎಂದು ಆರೋಪಿಸದರು.
PublicNext
17/07/2025 03:56 pm