ಬೆಂಗಳೂರು : ಭೂ ಸುರಕ್ಷಾ ಯೋಜನೆಯ ಅಡಿ ಭೂ ದಾಖಲೆಗಳು ಡಿಜಿಟಲೀಕರಣಗೊಳ್ಳುವ ಪ್ರಕ್ರಿಯೆ ಇಡೀ ರಾಜ್ಯದಲ್ಲೇ ಬೆಂಗಳೂರು ನಗರ-ಗ್ರಾಮಾಂತರ ಜಿಲ್ಲೆಗಳು ಕೆಟ್ಟ ದಾಖಲೆ ಹೊಂದಿದ್ದು, ಈ ಸಂಬಂಧ ಇಂದು ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳು, ಎಸಿ, ತಹಶೀಲ್ದಾರ್, ಡೆಪ್ಯೂಟಿ ತಹಶೀಲ್ದಾರ್ ಗಳ ಸಭೆ ನಡೆಸಲಾಗುತ್ತಿದೆ.
ಈ ಸಭೆಯಲ್ಲಿ ತಹಶೀಲ್ದಾರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಕೃಷ್ಣ ಬೈರೇಗೌಡ, ಕೆಲಸ ಮಾಡ್ರಿ ಅಂದ್ರೆ ನೆಪ ಹೇಳ್ತೀರಲ್ರಿ, ನಿಮಗೆ ನಾಚಿಕೆ ಆಗಲ್ವ? ತಹಶೀಲ್ದಾರ್ ವಿರುದ್ಧ ಸಚಿವರು ಕಿಡಿ ಕಾರಿದ್ದಾರೆ, ನಿಮಗೆ ನಾಚಿಕೆ ಇದೆಯಾ? ನಿಮಗೆ ಏನಾದ್ರು ರೋಗ ಇದ್ಯಾ ಮಾತನಾಡಿ ಯಾಕೆ ಒಳ್ಳೆ ಕಳ್ಳ ಮಳ್ಳನತರಹ ಆಡ್ತಿದ್ದೀರಾ ಹೀಗೆ ತಹಶೀಲ್ದಾರರ ವಿರುದ್ಧ ಸಚಿವರು ಮಾತಿನ ಚಾಟಿ ಬಿಸಿದರು.
PublicNext
19/07/2025 05:29 pm