", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/52563-1752935682-_(1280-x-720-px)-(24).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಮಾಜಿ ಸಚಿವ ಶಾಸಕ ಬೈರತಿ ಬಸವರಾಜ್ ಮೇಲೆ ಎಫ್ ಐಆರ್ ಹಾಕಿರೋದಕ್ಕೆ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಸರ್ಕಾರದ ವಿರುದ್ಧ ತೀವ್ರ ವಾಗ್ದ...Read more" } ", "keywords": "Bairathi Basavaraj, FIR controversy, targeted investigation, Shobha Karandlaje statement, Bengaluru news", "url": "https://dashboard.publicnext.com/node" }
ಬೆಂಗಳೂರು : ಮಾಜಿ ಸಚಿವ ಶಾಸಕ ಬೈರತಿ ಬಸವರಾಜ್ ಮೇಲೆ ಎಫ್ ಐಆರ್ ಹಾಕಿರೋದಕ್ಕೆ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು,ಬೈರತಿ ಬಸವರಾಜು ಮೇಲೆ ಎರಡು ಎಫ್ಐಆರ್ ಹಾಕಲಾಗಿದೆ, ಮೊದಲ ಕಾಪಿಯಲ್ಲಿ ಬೈರತಿ ಬಸವರಾಜ್ ಅವರ ಹೆಸರಿಲ್ಲ,ಎರಡನೇ ಎಫ್ಐಆರ್ ನಲ್ಲಿ ವಿಜಯಲಕ್ಷ್ಮಿ ಅವರು ಬೈರತಿ ಬಸವರಾಜ್ ಹೆಸರು ಹೇಳಿದ್ದಾರೆ ಅಂತ ಪೊಲೀಸರು ಬರೆದುಕೊಂಡಿದ್ದಾರೆ ಆದ್ರೆ ವಿಜಯಲಕ್ಷ್ಮಿ ಹೆಸರು ಹೇಳಿಲ್ಲ, ಪೊಲೀಸರೇ ಹೆಸರು ಬರೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ವಿಜಯಲಕ್ಷ್ಮಿ ಅವರನ್ನೇ ಈಗ ಹೋಗಿ ಕೇಳಿದರೂ ಅವರು ಬೈರತಿ ಹೆಸರು ಹೇಳಿಲ್ಲ ಅಂತಾರೆ, ಸ್ಪಾಟ್ ನಲ್ಲಿ ಬೈರತಿ ಬಸವರಾಜ್ ಇರಲಿಲ್ಲ ಅಂತ ವಿಜಯಲಕ್ಷ್ಮಿ ಸ್ಪಷ್ಟ ಮಾಡಿದ್ದಾರೆ ಹಾಗಿದ್ರೆ ಒಂದು ಠಾಣೆಯಲ್ಲಿ ಎರಡೆರಡು ಎಫ್ಐಆರ್ ಹೇಗೆ ದಾಖಲಾದವು? ಯಾಕೆ ದಾಖಲಾಯಿತು? ಇದನ್ನು ಸರ್ಕಾರ ಸ್ಪಷ್ಟ ಪಡಿಸಬೇಕು ಇಲ್ಲಿ ಬೈರತಿ ಬಸವರಾಜ್ ಅವರನ್ನು ಉದ್ಧೇಶಪೂರ್ಕವಾಗಿ ಸಿಲುಕಿಸಲು ಎರಡೆರಡು ಎಫ್ಐಆರ್ ಹಾಕಿದ್ದಾರೆ ಇದು ಸರ್ಕಾರದ ಮಸಲತ್ತು ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
PublicNext
19/07/2025 08:06 pm