ನೇಪಾಳ: ಕರ್ನಾಟಕದಿಂದ ನೇಪಾಳಕ್ಕೆ ಪ್ರವಾಸಕ್ಕೆ ಹೋಗಿದ್ದ 30 ಜನರ ತಂಡ ಸಮಸ್ಯೆಗೆ ಸಿಲುಕಿದೆ. ಆನಕೇಲ್ ಸೇರಿದಂತೆ ಬೇರೆ ಬೇರೆ ಏರಿಯಾದಿಂದ ಹೋಗಿದ್ದ ಸ್ನೇಹಿತರ,ವಿಮಾನ ಹಾರಾಟ ಸ್ಥಗಿತವಾಗಿದ್ರಿಂದ ಸಮಸ್ಯೆ ಎದುರಿಸುತ್ತಿದ್ದಾರೆ.
ನಮಗೆ ತುಂಬಾ ತೊಂದರೆಯಾಗಿದೆ, ದಯವಿಟ್ಟು ನಮ್ಮನ್ನ ಇಲ್ಲಿಂದ ಕರ್ಕೊಂಡು ಹೋಗುವ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದಾರೆ. ನೇಪಾಳದಲ್ಲಿ ಜನರು ದಂಗೆ ಎದ್ದಿದ್ರಿಂದ ಕರ್ಫ್ಯೂ ಇದೆ. ನಮಗೆ ಓಡಾಡೋಕೆ ಆಗ್ತಿಲ್ಲ, ಮುಂದೆ ಊಟಕ್ಕೆ ಕೂಡ ತೊಂದರೆಯಾಗ್ಬೋದೆಂದು ಕನ್ನಡಿಗರು ಆತಂಕ ವ್ಯಕ್ತಪಡಿಸಿದ್ದಾರೆ.
PublicNext
10/09/2025 09:33 pm