", "articleSection": "Politics,News", "image": { "@type": "ImageObject", "url": "https://prod.cdn.publicnext.com/s3fs-public/463655-1753154547-manjunath-(6).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ಧರ್ಮಸ್ಥಳ ರಹಸ್ಯ ಅಂತ್ಯಕ್ರಿಯೆ ಪ್ರಕರಣದ ತನಿಖೆಯನ್ನು ಯಾವುದೇ ವ್ಯಕ್ತಿಯನ್ನು ಗುರಿಯಾಗಿಸದೆ ನಿಷ್ಪಕ್ಷಪಾತವಾಗಿ, ನಿರ್ಧಿಷ್ಟ ಕಾ...Read more" } ", "keywords": " Dharmasthala, mass burial, SIT, investigation, Karnataka, Pronab Mohanty, murders, burials, whistleblower, Sri Dharmasthala Manjunatheshwara Temple, Dakshina Kannada, sexual assault, police probe, justice, transparency. ", "url": "https://dashboard.publicnext.com/node" }
ಬೆಂಗಳೂರು: ಧರ್ಮಸ್ಥಳ ರಹಸ್ಯ ಅಂತ್ಯಕ್ರಿಯೆ ಪ್ರಕರಣದ ತನಿಖೆಯನ್ನು ಯಾವುದೇ ವ್ಯಕ್ತಿಯನ್ನು ಗುರಿಯಾಗಿಸದೆ ನಿಷ್ಪಕ್ಷಪಾತವಾಗಿ, ನಿರ್ಧಿಷ್ಟ ಕಾಲಮಿತಿಯೊಳಗೆ ಮುಗಿಸಲು ವಿಶೇಷ ತನಿಖಾ ತಂಡ (ಎಸ್ಐಟಿ) ತೀರ್ಮಾನಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೂರುದಾರರ ಮೇಲೆ ಒತ್ತಡ ಹೇರಿದವರು ಯಾರು ಎಂಬುದರ ತನಿಖೆಯನ್ನೂ ಎಸ್ಐಟಿ ನಡೆಸಬೇಕು," ಎಂದರು. ಧರ್ಮಸ್ಥಳದಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿಗೆ ಅಲ್ಲಿನ ದೇವಾಲಯದ ಮಹತ್ವ ಸ್ಪಷ್ಟವಾಗಿ ತಿಳಿದಿದೆ; ಆದ್ದರಿಂದ ತನಿಖೆ ಸಂಪೂರ್ಣ ನಿಷ್ಪಕ್ಷಪಾತವಾಗಿರಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಒಳಗಿನ ಬೆಳವಣಿಗೆಗಳ ಕುರಿತಂತೆ ಪ್ರತಿಕ್ರಿಯಿಸಿದ ಅವರು, "ರಾಜ್ಯದಲ್ಲಿ ಪ್ರಮುಖ ರಾಜಕೀಯ ಬದಲಾವಣೆ ಸನ್ನಿಹಿತದಲ್ಲಿದೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್ ನೀಡಿರುವುದಕ್ಕಾಗಿ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಕ್ರಮವನ್ನು ಬೊಮ್ಮಾಯಿ ಉಗ್ರವಾಗಿ ಟೀಕಿಸಿದರು. "ಸಣ್ಣ ವ್ಯಾಪಾರಿಗಳಿಗೂ ನೋಟಿಸ್ ನೀಡುವುದರಿಂದ ಅವರ ದಿನಚರಿ ವ್ಯವಹಾರಗಳಿಗೆ ತೀವ್ರ ಧಕ್ಕೆಯಾಗುತ್ತಿದೆ," ಎಂದು ಹೇಳಿದರು.
ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ ಅವರು ಸರ್ಕಾರ ಎಸ್ಐಟಿ ರಚಿಸಿದ ನಿರ್ಧಾರವನ್ನು ಸ್ವಾಗತಿಸಿ, "ದೇವಾಲಯದ ಬಗ್ಗೆ ಸುಳ್ಳು ಮಾಹಿತಿ ಹರಡುವುದು ಅಸಹ್ಯಕರ. ತನಿಖೆ ಯಾರನ್ನೂ ತಪ್ಪಾಗಿ ಸಿಲುಕಿಸದಂತೆ ನಡೆಯಬೇಕು. ಇಷ್ಟು ಶವಗಳು ಕಂಡು ಬಂದಿದ್ದರೆ, ಸಂತ್ರಸ್ತರ ಕುಟುಂಬಗಳು ದೂರು ನೀಡುತ್ತಿದ್ದರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಂತಹ ಪ್ರಕರಣಗಳ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು," "ಧಾರ್ಮಿಕ ಸ್ಥಳದ ಖ್ಯಾತಿಗೆ ಧಕ್ಕೆ ತರುವ ರೀತಿಯಲ್ಲಿ ವಿವಾದ ಸೃಷ್ಟಿಸುವುದು ಒಳ್ಳೆಯದಲ್ಲ. ಪ್ರಸ್ತುತ ಕೇಳಿ ಬರುತ್ತಿರುವ ಆರೋಪಗಳಿಗೆ ಧರ್ಮಸ್ಥಳದ ದೇವಸ್ಥಾನ ಆಡಳಿತಕ್ಕೇನೂ ಸಂಬಂಧವಿಲ್ಲ," ಎಂದರು.
PublicNext
22/07/2025 08:52 am