ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದಾವಣಗೆರೆ, ಬಾಗಲಕೋಟೆ ಎರಡೂ ಕಡೆ ನಾವು ಗೆಲ್ತೇವೆ; ಸಂಸದ ಕೋಟ ವಿಶ್ವಾಸ

ಉಡುಪಿ: ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಾವು ಒಬ್ಬ ಹಿಂದುಳಿದ ವರ್ಗದ ಯುವಕನಿಗೆ ಟಿಕೆಟ್ ಕೊಟ್ಟಿದ್ದೇವೆ. ಬಾಗಲಕೋಟೆಯಲ್ಲಿ ಈ ಹಿಂದೆ ಸೋತವರಿಗೆ ಕೊಟ್ಟಿದ್ದೇವೆ.

ಎರಡೂ ಕಡೆ ನಮ್ಮ ಶಾಸಕರು ಇಲ್ಲ. ಆದರೆ, ಸರಕಾರದ ಜನವಿರೋಧಿ ಧೋರಣೆಗಳಿಂದ ಜನರು ಬೇಸತ್ತಿದ್ದಾರೆ ಎಂಬುದು ಎರಡೂ ಕ್ಷೇತ್ರಗಳಿಗೆ ನಾವು ಹೋಗಿ ನೋಡಿದಾಗ ಗೊತ್ತಾಯಿತು. ಆದ್ದರಿಂದ ಈ ಸಲ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.

Edited By : Vinayak Patil
PublicNext

PublicNext

30/03/2026 04:50 pm

Cinque Terre

11.65 K

Cinque Terre

0