", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/405356-1750696106-dana.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಸ್ಕಿ: ಮಸ್ಕಿ ತಾಲೂಕಿನ ವೆಂಕಟಾಪುರ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ, ಹೊಲಗಳಲ್ಲಿ 200ಕ್ಕೂ ಅಧಿಕ ಬಿಡಾಡಿ ದನಗಳು ಬೀಡು ಬಿಟ್ಟಿದ್ದ...Read more" } ", "keywords": "Maski, wild boar problem, crop damage, farmer distress, wildlife issue.", "url": "https://dashboard.publicnext.com/node" }
ಮಸ್ಕಿ: ಮಸ್ಕಿ ತಾಲೂಕಿನ ವೆಂಕಟಾಪುರ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ, ಹೊಲಗಳಲ್ಲಿ 200ಕ್ಕೂ ಅಧಿಕ ಬಿಡಾಡಿ ದನಗಳು ಬೀಡು ಬಿಟ್ಟಿದ್ದು, ಈ ದನಗಳ ಹಾವಳಿಯಿಂದ ಜನರು ಅಕ್ಷರಶಃ ಕಣ್ಣೀರಿಡುವಂತಾಗಿದೆ. ತೊಗರಿ, ಸೂರ್ಯಪಾನ, ಸಜ್ಜೆ, ಹೆಸರು, ಇನ್ನಿತರ ಬೆಳೆಗಳನ್ನು ಅರಸಿ ಬಂದು ತಿಂದು ತೇಗುತ್ತಿರುವ ದನಗಳ ಅಟ್ಟಹಾಸಕ್ಕೆ ಅನ್ನದಾತರು ಕಂಗೆಟ್ಟು ಹೋಗಿದ್ದಾರೆ.
ಬಿಡಾಡಿ ದನಗಳಿಂದ ಹಗಲು- ರಾತ್ರಿ ಬೆಳೆ ಉಳಿಸಿಕೊಳ್ಳಲು ಕಾದರೂ ಕೂಡ ಹಿಂಡು ಹಿಂಡಾಗಿ ಬಂದು ಬೆಳೆ ತಿಂದು ಪರಾರಿ ಆಗುತ್ತಿವೆ. ಇತ್ತ ರೈತರು ತಮ್ಮ ಹೊಟ್ಟೆಪಾಡಿಗಾಗಿ ಬೆಳೆದಿದ್ದ ಬೆಳೆಯನ್ನೇ ಸರ್ವನಾಶ ಮಾಡುತ್ತಿವೆ. ರಾತ್ರಿಯೆಲ್ಲವೂ ತೋಟದಲ್ಲಿ ವಿಶ್ರಮಿಸಿಕೊಳ್ಳುವ ದನಗಳ ಹಿಂಡು ಬೆಳಗಾಗುತ್ತಲೇ ಊರೂರು ಅಲೆಯುತ್ತಾ ಸಿಕ್ಕ ಸಿಕ್ಕ ರೈತರ ಭೂಮಿಯಲ್ಲಿ ವಿವಿಧ ಪೈರು ತಿಂದು ನಾಶ ಮಾಡುತ್ತಿವೆ.
ಎಕರೆಗೆ 30 ರಿಂದ 35 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ್ದ ಬೆಳೆ, ದನಗಳ ಹೊಟ್ಟೆ ಸೇರುತ್ತಿದೆ. ಈಗಾಗಲೇ ಮುಂಗಾರು ಮಳೆಯಾದ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿ ಒಂದು ತಿಂಗಳು ಕಳೆದಿದ್ದು, ಬೆಳೆಗಳು ಮೊಳಕೆ ಒಡೆದಿದೆ. ಇಂತಹ ಸಂದರ್ಭದಲ್ಲಿ ಮಸ್ಕಿ ತಾಲ್ಲೂಕಿನ ವೆಂಕಟಾಪುರ, ಮುದಬಾಳ, ಬೇಲ್ಲದಮರಡಿ, ಅಂಕುಸದೊಡ್ಡಿ ಸೇರಿದಂತೆ ಮಸ್ಕಿ ಭಾಗದ ಗ್ರಾಮಗಳ ಸುತ್ತ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಜನರು ಜೀವ ಕೈಯಲ್ಲಿ ಹಿಡಿದು ಬೆಳೆ ರಕ್ಷಣೆಗೆ ಹೆಣಗಾಡುತ್ತಿದ್ದಾರೆ.
ಇನ್ನು ಈ ಬಗ್ಗೆ ವೆಂಕಟಪುರ ಗ್ರಾಮದ ರೈತ ರಮೇಶ್ ಎನ್ನುವವರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಮಾಹಿತಿ ಕೇಳಿದರೆ ಬಿಡಾಡಿ ದನಗಳ ಹಾವಳಿಯನ್ನು ತಡೆಗಟ್ಟಲು ನಮಗೆ ಸಂಬಂಧವಿಲ್ಲ. ನೀವು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ಕೇಳಿ ಎಂದು ಹೇಳುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳು ಇನ್ನಾದರೂ ಬಿಡಾಡಿ ದನಗಳ ಸಮಸ್ಯೆಯ ಮೂಲ ಅರಿತು ರೈತಾಪಿ ವರ್ಗದ ಜನರ ನೋವು ದೂರ ಮಾಡುವ ಕೆಲಸ ಮಾಡಬೇಕಿದೆ.
ವರದಿ: ದುರ್ಗೇಶ್ ಹಸಮಕಲ್, ಮಸ್ಕಿ
Kshetra Samachara
23/06/2025 09:58 pm