", "articleSection": "Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1750757137-dali.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MaheshKalburgi" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಲಬುರಗಿ:ಆರ್ಡಿಪಿ ಇಲಾಖೆಯ ಕಲಬುರಗಿ ವಿಭಾಗದ ಇಇ ಮಲ್ಲಿಕಾರ್ಜುನ್ ಅಲ್ಲಿಪುರ್ ಹಾಗೂ ಸಣ್ಣೂರು ಗ್ರಾಮ ಪಂಚಾಯತಿ ಪಿಡಿಒ ಇಬ್ಬರು ಅಧಿಕಾರಿಗಳಿಗೆ ಬ...Read more" } ", "keywords": "Kalaburagi, Lokayukta raid, corrupt officials, anti-corruption drive, government action.", "url": "https://dashboard.publicnext.com/node" } ಕಲಬುರಗಿ: ಬೆಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಬೆಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್

ಕಲಬುರಗಿ:ಆರ್ಡಿಪಿ ಇಲಾಖೆಯ ಕಲಬುರಗಿ ವಿಭಾಗದ ಇಇ ಮಲ್ಲಿಕಾರ್ಜುನ್ ಅಲ್ಲಿಪುರ್ ಹಾಗೂ ಸಣ್ಣೂರು ಗ್ರಾಮ ಪಂಚಾಯತಿ ಪಿಡಿಒ ಇಬ್ಬರು ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತರು ದಾಳಿ ಮಾಡಿ ಶಾಕ್ ನೀಡಿದ್ದಾರೆ.

ಮಲ್ಲಿಕಾರ್ಜುನ ಅಲಿಪುರ ನಾಲ್ಕು ತಿಂಗಳಲ್ಲೇ ಸೇವೆಯಿಂದ ನಿವೃತ್ತಿ ಹೊಂದಲಿದ್ದು, ಅವರ ಬೆಂಗಳೂರಿನ ಮನೆ, ಕಲಬುರಗಿಯ ಕಛೇರಿ ಮೇಲೆ ದಾಳಿ ಮಾಡಿದ್ದು, ಮತ್ತು ಕಲಬುರಗಿ ತಾಲೂಕಿನ ಸಣ್ಣೂರು ಗ್ರಾಮ ಪಂಚಾಯಿತಿಯ ಪಿಡಿಒ ರಾಮಚಂದ್ರ ಮನೆ ಮೇಲೆ ಹಾಗೂ ಸೇಡಂ ರಸ್ತೆಯ ಮಾನಸ ರೆಸಿಡೆನ್ಸಿ ಮೇಲೆ, ವಿಜಯಪುರದ ಬೊಮ್ಮನಹಳ್ಳಿ ಗ್ರಾಮದ ಮನೆಯ ಮೇಲೆ ದಾಳಿ ಮಾಡಲಾಗಿದೆ.

ಪೊಲೀಸ್ರ ಸಮ್ಮುಖದಲ್ಲಿ ದಾಳಿ ಮಾಡಿದ್ದು,ಇಬ್ಬರ ವಿರುದ್ಧ ಸಾಕಷ್ಟು ಪ್ರಸ್ತುತ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು. ಮತ್ತು ಸರ್ಕಾರದ ಕಣ್ಣು ತಪ್ಪಿಸಿ ಅವ್ಯವಹಾರ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ತಿಳಿದುಕೊಂಡು ದಾಳಿ ಮಾಡಲಾಗಿದೆ

ದಾಳಿಯ ನಂತರ ಮನೆಯಲ್ಲಿರುವ ಕೆಲವೊಂದು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಹಾಗೂ ಮೌಖಿಕವಾಗಿ ಕೆಲವೊಂದು ದಾಖಲೆಗಳು ಕೂಡ ಮಾಹಿತಿ ಪಡೆಯುತ್ತಿದ್ದಾರೆ ಎಂದು ಪ್ರಾಥಮಿಕವಾಗಿ ವರದಿ ತಿಳಿದು ಬಂದಿದ್ದು, ಪ್ರಸ್ತುತ ಆದಾಯ ಹಾಗೂ ಅವರ ಹಿಂದಿನ ಚಿರಾಯು ಆಸ್ತಿ ಹಾಗೂ ಇವಾಗಿನ ಆದಾಯ ಬಗ್ಗೆ ತುಲನೆ ಮಾಡುವಂತಹ ಕೆಲಸ ಅಧಿಕಾರಿಗಳು ಮಾಡುತ್ತಿದ್ದು, ಜೊತೆಗೆ ಕಚೇರಿ ಲೆಕ್ಕಪತ್ರದ ಬಗ್ಗೆ ಪರಿಶೀಲನೆ ನಡೆಸಲಾಗ್ತಿದೆ.

ಸದ್ಯಕ್ಕೆ ಈ ಪರಿಶೀಲನೆ ಸಾಯಂಕಾಲದವರೆಗೂ ಮುಂದುವರೆಯುವ ಸಾಧ್ಯತೆಗಳು ಇದೆ. ತನಿಖೆಯ ನಂತರ ಭ್ರಷ್ಟಾಚಾರದ‌ ಮಾಹಿತಿ ಸಂಪೂರ್ಣವಾಗಿ ಹೊರಬರಲಿದೆ.

Edited By : Vinayak Patil
PublicNext

PublicNext

24/06/2025 02:55 pm

Cinque Terre

15.01 K

Cinque Terre

0