", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/235762-1750828954-WhatsApp-Image-2025-06-25-at-10.43.44-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಚನ್ನಪಟ್ಟಣ: ನಾನು ಪಕ್ಷದ ಕಾರ್ಯಕರ್ತನಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಇದರಲ್ಲಿ ನನ್ನ ಸ್ವಾರ್ಥ ಏನು ಇಲ್ಲ, ಸಂಸತ್ ಚುನಾವಣೆ ನಲ್ಲಿ ನಿ...Read more" } ", "keywords": "Ramanagara election, Nikhil Kumaraswamy, Karnataka politics, JD(S) leader, Nikhil Kumaraswamy statement, Ramanagara constituency", "url": "https://dashboard.publicnext.com/node" }
ಚನ್ನಪಟ್ಟಣ: ನಾನು ಪಕ್ಷದ ಕಾರ್ಯಕರ್ತನಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಇದರಲ್ಲಿ ನನ್ನ ಸ್ವಾರ್ಥ ಏನು ಇಲ್ಲ, ಸಂಸತ್ ಚುನಾವಣೆ ನಲ್ಲಿ ನಿಲ್ಲಬೇಕು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲಬೇಕು ಎಂದು ನಿರ್ಧಾರ, ತೀರ್ಮಾನ ಮಾಡಿಲ್ಲ ಎಂದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಐದನೇ ದಿನದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಇರುವುದೊಂದೆ ಪ್ರಾದೇಶಿಕ ಪಕ್ಷ ಉಳಿಯಬೇಕು. ನಿಮ್ಮ ಅಕ್ಕ ಪಕ್ಕ ತೆಲಂಗಾಣ, ಆಂಧ್ರಪ್ರದೇಶದಲ್ಲಿ ಎಲ್ಲಿ ನೋಡಿದ್ರು ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿ ನೆಲೆಯೂರಿವೆ. ಕರ್ನಾಟಕದಲ್ಲಿ ದೇವೇಗೌಡರು ಹಾಗೂ ಕುಮಾರಣ್ಣನವರು ಅತ್ಯಂತ ಕಡಿಮೆ ಅವಧಿಯಲ್ಲಿ ಅವರು ಮಾಡಿದ ಸಾಧನೆಗಳು ಎಲ್ಲರ ಮನೆ ಮಾತಾಗಿದೆ ಎಂದರು. ಇವತ್ತು ಹೊಸದಾಗಿ ಕಾಂಗ್ರೆಸ್ ಸರ್ಕಾರ S ಟ್ಯಾಕ್ಸ್ ಜಾರಿ ಮಾಡಿದೆ. S ಟ್ಯಾಕ್ಸ್ ಅದರ ಹಿಂದಿನ ಅರ್ಥ ನೀವೇ ಅರ್ಥ ಮಾಡಿಕೊಳ್ಳಬೇಕು. ಗುತ್ತಿಗೆದಾರರಿಗೆ, ಅಧಿಕಾರಿಗಳ ವರ್ಗಾವಣೆ ಟ್ಯಾಕ್ಸ್ ಎಂದು ಅವರು ಆರೋಪಿಸಿದರು. ಇವತ್ತು ರಾಜ್ಯದಲ್ಲಿ ಒಂದೇ ಚರ್ಚೆ ಕುಮಾರಣ್ಣ ಅಧಿಕಾರ ದಲ್ಲಿದ್ದಾಗ ನಾಡು ಸಮೃದ್ಧವಾಗಿತ್ತು. ರೈತರು ನೆಮ್ಮದಿಯಿಂದ ಜೀವನ ಮಾಡುತ್ತಿದ್ದರು. ಯಾವುದೇ ತಾರತಮ್ಯ ಮಾಡದೆ ಎಲ್ಲ ವರ್ಗವನ್ನು ವಿಶ್ವಾಸದಿಂದ ಕಾಣುತ್ತಿದ್ದರು. ಒಳ್ಳೆಯ ಕಾರ್ಯಕ್ರಮಗಳನ್ನು ಕೊಟ್ಟಿದ್ದರು ಎಂದು ಜನ ರಾಜ್ಯದಲ್ಲಿ ಮಾತಾಡ್ತಿದ್ದಾರೆ ಎಂದು ತಿಳಿಸಿದರು.
ನಾನು ಶಾಸಕನಾಗಬೇಕು, ಸಂಸದನಾಗಬೇಕು ಎಂಬುದು ನನ್ನ ಮುಂದೆ ಇಲ್ಲ. ನಾನು 58 ದಿನಗಳ ಕಾಲ ರಾಜ್ಯ ಪ್ರವಾಸ ಮಾಡುತ್ತಿರುವುದು ಯಾಕೆಂದ್ರೆ, ಈ ಪಕ್ಷವನ್ನು ಉಳಿಸಬೇಕು. ಯಾವುದೇ ಅಪೇಕ್ಷೆ ಇಲ್ಲದೆ ನಿಷ್ಠಾವಂತ ಕಾರ್ಯಕರ್ತರು ಈ ಪಕ್ಷವನ್ನು ಕಟ್ಟಿದ್ದಾರೆ. ಅವರಿಗೋಸ್ಕರ ನಾನು ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ ಎಂದರು.
ಇದು ನಮ್ಮ ಜಿಲ್ಲೆ, ನೀವು ಬೆಳೆಸಿದ ಮನೆಮಕ್ಕಳು ನಾವು. ನಮ್ಮನ್ನ ಹರಸಿದ್ದೀರಿ, ಬೆಳೆಸಿದ್ದೀರಿ . ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ. ಅದನ್ನು ಸ್ಪಷ್ಟವಾಗಿ ಹೇಳುತ್ತೇನೆ. ಸಮಯಾವ ಅವಕಾಶ ಬರುತ್ತೆ. ಕಾಲಚಕ್ರ ತಿರುಗುತ್ತೆ. ನಿಮ್ಮ ಈ ಪ್ರೀತಿ ವಿಶ್ವಾಸವನ್ನ ಉಳಿಸಿಕೊಳ್ಳುವ ಪ್ರಾಮಾಣಿಕ ಕೆಲಸ ಮಾಡ್ತೀನಿ ಎಂದು ತಿಳಿಸಿದರು.
Kshetra Samachara
25/06/2025 10:58 am