", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1751080377-WhatsApp-Image-2025-06-28-at-8.42.45-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ : ಗೋಕಾಕ ಜಾತ್ರೆಯಲ್ಲಿ ಸಾರ್ವಜನಿಕರಿಗೆ ಬ್ಯಾನರ್ ಹಾಕಲು ಅನುಮತಿ ನೀಡದ ನಗರಸಭೆಯ ಆಯುಕ್ತರ ಧೋರಣೆ ಖಂಡಿಸಿ ಸಂಗೋಳ್ಳಿ ರಾಯಣ್ಣನ ವೃತ್ತದ...Read more" } ", "keywords": "ಗೋಕಾಕ ಜಾತ್ರೆಯಲ್ಲಿ ಬ್ಯಾನರ್ ಅಳವಡಿಸಲು ನಿರಾಕರಣೆ : ನಗರ ಸಭೆ ಮುಂದೆ ಪ್ರತಿಭಟನೆ", "url": "https://dashboard.publicnext.com/node" }
ಬೆಳಗಾವಿ : ಗೋಕಾಕ ಜಾತ್ರೆಯಲ್ಲಿ ಸಾರ್ವಜನಿಕರಿಗೆ ಬ್ಯಾನರ್ ಹಾಕಲು ಅನುಮತಿ ನೀಡದ ನಗರಸಭೆಯ ಆಯುಕ್ತರ ಧೋರಣೆ ಖಂಡಿಸಿ ಸಂಗೋಳ್ಳಿ ರಾಯಣ್ಣನ ವೃತ್ತದಲ್ಲಿ ಡಾ. ಮಹಾಂತೇಶ ಕಡಾಡಿಯವರು ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.
ಜಾತ್ರೆಯಲ್ಲಿ ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗಿ ಬ್ಯಾನರ್ ಹಾಕಲು ಅನುಮತಿ ನೀಡಿರುವುದು ಇದು ಸಾರ್ವಜನಿಕರಿಗೆ ಮತ್ತು ದೇವಿ ಭಕ್ತರಿಗೆ ಅವಮಾನ ಮಾಡಿದ್ದಾರೆ ಎಂದು ನಗರಸಭೆ ಆಯುಕ್ತರ ವಿರುದ್ಧ ಕಿಡಿಕಾರಿದರು.
ಇದು ಗೋಕಾಕ ಜಾತ್ರೆ ಕೇವಲ ಒಂದು ಕುಟುಂಬದ ಜಾತ್ರೆಯಲ್ಲ ನಾವು ಕೂಡ ಜಾತ್ರೆಗೆ ದೇಣಿಗೆ ನೀಡಿದ್ದೇವೆ, ಜಾತ್ರಾ ಕಮೀಟಿಯವರನ್ನು ಕರೆಯಿರಿ ನಾವು ಅವರನ್ನು ಕೇಳುತ್ತೇವೆಂದು ಪಟ್ಟು ಹಿಡಿದರು.
ಹಲವಾರು ಗೋಕಾಕ ಸಾರ್ವಜನಿಕರು ಬ್ಯಾನರ ಅಳವಡಿಸಲು ನಗರಸಭೆಗೆ ಅನುಮತಿಗಾಗಿ ಅರ್ಜಿ ಹಾಕಿದರು ಸಹ ನಗರಸಭೆಯವರು ಜಾತ್ರಾ ಕಮೀಟಿಯವ ಮೇಲೆ ಹಾಕುತಿದ್ದಾರೆ, ಇನ್ನು ಜಾತ್ರಾ ಕಮಿಟಿಯವರು ಬ್ಯಾನರ್ ಅನುಮತಿಯನ್ನು ನಗರಸಭೆಯವರು ನೀಡುತ್ತಾರೆಂದು ತಿಳಿಸಿದ್ದಾರೆ. ಇದೆ ರೀತಿ ಜಾತ್ರೆಯ ಮೆರಗನ್ನು ಹೆಚ್ಚಿಸಬೇಕೆಂದು ಸಾರ್ವಜನಿಕರ ಆಸೆಯಾಗಿದ್ದರೆ ಇನ್ನೊಂದು ಕಡೆ ಒಂದೆ ಕುಟುಂಬಕ್ಕೆ ಸಿಮಿತವಾಗಿ ನಗರಸಭೆ ಅಧಿಕಾರಿಗಳು ವರ್ತಿಸುತಿದ್ದಾರೆಂದು ಡಾ. ಮಹಾಂತೇಶ ಕಡಾಡಿ ಗಂಭೀರ ಆರೋಪ ಮಾಡಿದ್ದಾರೆ.
ಇದರ ಜೊತೆಯಲ್ಲಿ ಜಾತ್ರಾ ಕಮೀಟಿಯವರ ಒಂದೆ ಒಂದು ಸ್ವಾಗತ ಕೊರುವ ಬ್ಯಾನರ ಕೂಡ ಗೋಕಾಕ ನಗರದಲ್ಲಿ ಎಲ್ಲಿಯೂ ಇಲ್ಲ, ಒಂದು ವೇಳೆ ಜಾತ್ರಾ ಕಮಿಟಿಯವರು ಅನುಮತಿ ನೀಡುತ್ತಾರೆಂದರೆ ಎಲ್ಲರ ಬ್ಯಾನರ ಕಿತ್ತು ಹಾಕಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೊರಾಟಗಾರ ದಸ್ತಗೀರ ಪೈಲವಾನ, ಸದಾನಂದ ಗುದಗಗೋಳ ಸೇರಿದಂತೆ ಇನ್ನುಳಿದವರು ಪ್ರತಿಭಟನೆ ಭಾಗಿಯಾಗಿದ್ದರು.
PublicNext
28/06/2025 08:44 am