", "articleSection": "Politics,News,Religion", "image": { "@type": "ImageObject", "url": "https://prod.cdn.publicnext.com/s3fs-public/421698-1751000391-Youtube-HD.00_16_55_02.Still2481~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಅಡವಿಸಿದ್ಧರಾಮ ಸ್ವಾಮೀಜಿ ‌ಲೇಡಿ ಜೊತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಹಿನ್ನಲೆ ಹತ್ತಕ್ಕೂ ಅಧಿಕ ಮಠಾಧೀಶರ ಜೊತೆಗೆ ಶಾಸಕ ಬಾಲಚಂ...Read more" } ", "keywords": "Adavisiddharama Swamy allegations false, MLA Balachandra Jarkiholi statement, Balachandra Jarkiholi defends Adavisiddharama Swamy, false accusations Adavisiddharama Swamy, MLA Balachandra Jarkiholi clears name, Adavisiddharama Swamy controversy, Balachandra Jarkiholi on allegations, MLA supports Adavisiddharama Swamy, Adavisiddharama Swamy innocence, Balachandra Jarkiholi political statement", "url": "https://dashboard.publicnext.com/node" } ಅಡವಿಸಿದ್ಧರಾಮ ಸ್ವಾಮಿ ಮೇಲೆ ಇದ್ದ ಆರೋಪ ಸುಳ್ಳು: ಶಾಸಕ ಬಾಲಚಂದ್ರ ಜಾರಕಿಹೊಳಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಡವಿಸಿದ್ಧರಾಮ ಸ್ವಾಮಿ ಮೇಲೆ ಇದ್ದ ಆರೋಪ ಸುಳ್ಳು: ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ: ಅಡವಿಸಿದ್ಧರಾಮ ಸ್ವಾಮೀಜಿ ‌ಲೇಡಿ ಜೊತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಹಿನ್ನಲೆ ಹತ್ತಕ್ಕೂ ಅಧಿಕ ಮಠಾಧೀಶರ ಜೊತೆಗೆ ಶಾಸಕ ಬಾಲಚಂದ್ರ ‌ಜಾರಕಿಹೊಳಿ ಸಭೆ ನಡೆಸಿದ್ದು, ಅಡವಿಸಿದ್ಧರಾಮ ಸ್ವಾಮೀಜಿ ವಿರುದ್ಧ ಕೇಳಿ ಬಂದಿದ್ದ ಆರೋಪಗಳೆಲ್ಲವೂ ಸುಳ್ಳು ಎಂದು ಅವರು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಶೂನ್ಯ ಸಂಪಾದನಾ ಮಠದಲ್ಲಿ ನಡೆದ ಸಭೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಅಡವಿಸಿದ್ಧರಾಮ ಸ್ವಾಮೀಜಿ ವಿರುದ್ಧ ಕೇಳಿ ಬಂದಿದ್ದ ಆರೋಪಗಳೆಲ್ಲವೂ ಸುಳ್ಳು. ಮರಳಿ ಶಿವಾಪುರ ಗ್ರಾಮದ ಅಡವಿ ಮಠಕ್ಕೆ ಸ್ವಾಮೀಜಿ ಮರಳಲಿದ್ದಾರೆ. ಶಿವಾಪುರ ಗ್ರಾಮದ ಬಗ್ಗೆ ಈಗಾಗಲೇ ಸಾಕಷ್ಟು ವರದಿಗಳು ಬಂದಿವೆ. ಅಡವಿಸಿದ್ದೇಶ್ವರ ಮಠದ ಸ್ವಾಮೀಜಿ ಬಗ್ಗೆಯೂ ಆಪಾದನೆಗಳು ಬಂದಿವೆ. ಎಲ್ಲ ಸ್ವಾಮೀಜಿಗಳು ಹಾಗೂ ಶಿವಾಪುರ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಭೆ ಮಾಡಿದ್ದೇವೆ. ಮಠದಲ್ಲಿ ನಡೆದ ಘಟನೆ ಬಗ್ಗೆ ವರದಿ ನೀಡಲು ಪೊಲೀಸರಿಗೆ ಸೂಚನೆ ನೀಡಿದ್ದೆ. ಪೊಲೀಸರು ನೀಡಿದ ವರದಿ ಆಧರಿಸಿ ಸ್ವಾಮೀಜಿಗಳ ಸಮ್ಮುಖದಲ್ಲಿ ಚರ್ಚಿಸಿದ್ದೇವೆ. ಸ್ವಾಮೀಜಿ ವಿರುದ್ಧ ಕೇಳಿ ಬಂದ ಆರೋಪಗಳೆಲ್ಲವೂ ಸುಳ್ಳು ಎಂಬುದು ದೃಢವಾಗಿದೆ ಎಂದರು.

ಘಟನೆಯಿಂದ ಬೆಳಗಾವಿಯ ಎಲ್ಲ ಪೂಜ್ಯರ ಮನಸ್ಸಿಗೆ ನೋವಾಗಿದೆ. ಶಿವಾಪುರದ ಅಡವಿಸಿದ್ಧರಾಮ ಸ್ವಾಮೀಜಿ ಕೂಡ ಸಾಕಷ್ಟು ನೊಂದಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಸ್ವಾಮೀಜಿಗಳಿಗೆ ಕೆಟ್ಟ ಹೆಸರು ಬರ್ತಾ ಇತ್ತು. ನಮ್ಮ ಶಿವಾಪುರ ಶ್ರೀಗಳು ಈಗ ಆಪಾದನೆಯಿಂದ ಹೊರ ಬಂದಿದ್ದಾರೆ. ಮಠದ ಸುತ್ತಲೂ ಕುಡಿದು ಯಾರಾದರೂ ಗಲಾಟೆ ಮಾಡಿದ್ರೆ ಕ್ರಮ ವಹಿಸಲು ಸೂಚಿಸಿದ್ದೇವೆ. ಅಂದು ಮಠದಲ್ಲಿ ದೊಡ್ಡ ಶೋ ನಡೆದಿತ್ತು, ಈಗ ಎಲ್ಲವೂ ಶಾಂತವಾಗಿದೆ. ಪೂಜ್ಯರ ಮೇಲೆ ಇಲ್ಲ ಸಲ್ಲದ ಆರೋಪ ಬೇಡ. ಸ್ವಾಮೀಜಿಗಳು, ಶಿವಾಪೂರ ಗ್ರಾಮಸ್ಥರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿದ್ದೇವೆ ಎಂದರು.

Edited By : Suman K
PublicNext

PublicNext

27/06/2025 10:30 am

Cinque Terre

17.87 K

Cinque Terre

0

ಸಂಬಂಧಿತ ಸುದ್ದಿ