", "articleSection": "Law and Order", "image": { "@type": "ImageObject", "url": "https://prod.cdn.publicnext.com/s3fs-public/43595620250629092054filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಸುಳ್ಯ,:ಸುಳ್ಯದ ಕೆಎಫ್ ಡಿಸಿ ವಸತಿ ಗೃಹದಿಂದ ಚಿನ್ನ ಮತ್ತು ನಗದನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ನ್ಯಾಯಾಲಯದಲ್ಲಿ ಆರೋಪ...Read more" } ", "keywords": "Node", "url": "https://dashboard.publicnext.com/node" }
ಸುಳ್ಯ,:ಸುಳ್ಯದ ಕೆಎಫ್ ಡಿಸಿ ವಸತಿ ಗೃಹದಿಂದ ಚಿನ್ನ ಮತ್ತು ನಗದನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ನ್ಯಾಯಾಲಯದಲ್ಲಿ ಆರೋಪಿಯ ವಿಚಾರಣೆ ನಡೆದು ಆರೋಪ ಸಾಬೀತಾಗಿದೆ.
2024 ಎಪ್ರಿಲ್ 29ರಂದು ಆರೋಪಿ ಆನಂದ ಎಂಬಾತ ಸುಳ್ಯ ಕಸಬಾ ಗ್ರಾಮದ ಕೇರ್ಪಳ ರಸ್ತೆಯ ಪುರಭವನ ಬಳಿ ಇರುವ ವೆ ಕೆಎಫ್ಡಿಸಿ ವಸತಿ ಗೃಹದ ಹಿಂಬದಿ ಬಾಗಿ ಲಿನ ಮೂಲಕ ಒಳ ಪ್ರವೇಶಿಸಿ ಕೋಣೆಯ ಕಪಾಟಿನಲ್ಲಿದ್ದ ನಗದು 30 ಸಾವಿರ ರೂ. ಹಾಗೂ 1 ಲಕ್ಷ ರೂ. ಮೌಲ್ಯದ ಒಂದು ಜೊತೆ ಚಿನ್ನದ ಬೆಂಡೋಲೆ, ಒಂದು ಚಿನ್ನದ ಚೈನ್, ಒಂದು ಕರಿಮಣಿ ಸರ, ಎರಡು ಚಿನ್ನದ ಉಂಗುರಗಳನ್ನು
ಕಳ್ಳತನ ಮಾಡಿ ಪರಾರಿಯಾಗಿದ್ದ. ಕದ್ದ ಹಣವನ್ನು ತನ್ನ ಸ್ವಂತಕ್ಕೆ ಖರ್ಚು ಮಾಡಿ ಕಳ್ಳತನ ಮಾಡಿದ ಸುಮಾರು 1 ಲಕ್ಷ ರೂ. ಮೌಲ್ಯದ ಒಟ್ಟು 22.439 ಗ್ರಾಂ ಚಿನ್ನಾಭರಣಗಳನ್ನು ಮಾರಾಟ ಮಾಡಿದ ಪ್ರಕರಣದ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಸುಳ್ಯದ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ. ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಬಿ.ಮೋಹನ್ ಬಾಬು ಆರೋಪಿಯನ್ನು ಶುಕ್ರವಾರ ದೋಷಿ ಎಂದು ತೀರ್ಪು ನೀಡಿದ್ದಾರೆ.
ಶಿಕ್ಷೆಯ ಪ್ರಮಾಣದ ವಾದ ಮಂಡನೆ ಜುಲೈ 1ರಂದು ನಡೆಯಲಿದೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜ ಕರು ವಾದ ಮಂಡಿಸಿದ್ದರು.
Kshetra Samachara
29/06/2025 09:20 pm