", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/405356-1751190843-varsha.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಾರ್ಕಳ: ಸ್ಪಂದನ ಸಾಂಸ್ಕೃತಿಕ ಕಲಾ ವೇದಿಕೆಗೆ ಈ ಬಾರಿ ಸಂಭ್ರಮ. ಸಂಸ್ಥೆಯು ತನ್ನ 20ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆ, ಬಹು ದಿ...Read more" } ", "keywords": "Udupi, Spandana, 20th anniversary celebration, Nasik band performance, volleyball tournament.", "url": "https://dashboard.publicnext.com/node" } ಉಡುಪಿ : ಸ್ಪಂದನ: 20ರ ಸಂಭ್ರಮ - ನಾಸಿಕ್ ಬ್ಯಾಂಡ್‌ನ ಆವರ್ತನ, ವಾಲಿಬಾಲ್ ಕೂಟದ ರಸದೌತಣ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಸ್ಪಂದನ: 20ರ ಸಂಭ್ರಮ - ನಾಸಿಕ್ ಬ್ಯಾಂಡ್‌ನ ಆವರ್ತನ, ವಾಲಿಬಾಲ್ ಕೂಟದ ರಸದೌತಣ!

ಕಾರ್ಕಳ: ಸ್ಪಂದನ ಸಾಂಸ್ಕೃತಿಕ ಕಲಾ ವೇದಿಕೆಗೆ ಈ ಬಾರಿ ಸಂಭ್ರಮ. ಸಂಸ್ಥೆಯು ತನ್ನ 20ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆ, ಬಹು ದಿನಗಳ ಕನಸಾಗಿರುವ ನಾಸಿಕ್ ಬ್ಯಾಂಡ್ ಖರೀದಿಯ ಉದ್ದೇಶಕ್ಕಾಗಿ ಆಯೋಜಿಸಲಾಗಿದ್ದ ವಾಲಿಬಾಲ್ ಪಂದ್ಯಾಕೂಟ ಯಶಸ್ವಿಯಾಗಿ ನೆರವೇರಿದ್ದು, ಸಂಸ್ಥೆಗೆ ಹೆಮ್ಮೆ ಹಾಗೂ ಸದಸ್ಯರ ಶ್ರಮದ ಫಲವಾಗಿದೆ.

ಜಡಿಮಳೆಯ ನಡುವೆಯೂ ಸ್ಪರ್ಧಾತ್ಮಕ ಮನೋಭಾವದಿಂದ ಸದಸ್ಯರು ಕೂಟದಲ್ಲಿ ಭಾಗವಹಿಸಿ, ಬಲಿಷ್ಠ ಸಹಭಾಗಿತ್ವವನ್ನು ತೋರಿದ್ದಾರೆ. ಈ ಶ್ರಮದಲ್ಲಿ ತೊಡಗಿದ ಎಲ್ಲರಿಗೂ ಸಂಸ್ಥೆಯು ಕೃತಜ್ಞತೆ ಸಲ್ಲಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪವನ್ ಕುಮಾರ್ ಶಿರ್ವ ಅವರು, ಸೋಲು ಗೆಲುವಿನ ಅಂಗವಲ್ಲ, ಎಲ್ಲರೂ ಸಮಾನ ಮನೋಭಾವದಿಂದ ಸ್ವೀಕರಿಸಬೇಕು ಎಂದು ಯುವಕರಿಗೆ ಮನವಿ ಮಾಡಿದರು.

ಸ್ನೇಹಪೂರ್ಣ ವಾತಾವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ "ಸ್ಪಂದನ ಟ್ರೋಫಿ – 2025" ಗೆ ಚಾಲನೆ ನೀಡಲಾಯಿತು. ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಶ್ರೀ ನವದುರ್ಗಾ ಟ್ರಾನ್ಸ್‌ಪೋರ್ಟ್‌ನ ಮಾಲಕರಾದ ಶ್ರೀ ಎಂ.ಜಿ. ಗಂಗಾಧರ್ ಉದ್ಘಾಟಿಸಿದರು.

ನಂತರ, ನಾಸಿಕ್ ಬ್ಯಾಂಡ್‌ಗೆ ಶ್ರೀಮತಿ ನತಾಲಿಯಾ ಮಾರ್ಟಿಸ್ (ಉಪಾಧ್ಯಕ್ಷೆ, ಕುರ್ಕಾಲು ಗ್ರಾಮ ಪಂಚಾಯತ್) ಚಾಲನೆ ನೀಡಿದರು. ಸಮಾಜ ಸೇವಕರಾದ ಶ್ರೀ ಪವನ್ ಕುಮಾರ್ ಶಿರ್ವ ಅವರು ವಿಶೇಷವಾಗಿ ಡಿಸೈನ್ ಮಾಡಲಾದ ಸ್ಟಿಕ್ಕರ್ ಅನಾವರಣಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಶ್ರೀ ಮಧುಸೂದನ್ ರಾವ್ ವಹಿಸಿದ್ದರು. ನಿಕಟ ಪೂರ್ವಾಧ್ಯಕ್ಷರಾದ ಶ್ರೀ ಪಾರ್ಥಸಾರಥಿ ಸ್ವಾಗತ ಭಾಷಣ ನೀಡಿ, ಕಾರ್ಯದರ್ಶಿ ನಿತೀಶ್ ಕುಮಾರ್ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ರಮೇಶ್ ಕೊಪ್ಪಲಂಗಡಿ ನಿರ್ವಹಿಸಿದರು. ವೇದಿಕೆಯಲ್ಲಿ ಕ್ರೀಡಾ ಕಾರ್ಯದರ್ಶಿ ಶ್ರೀ ರವಿತೇಶ್ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಪ್ರಜ್ವಲ್ ಉಪಸ್ಥಿತರಿದ್ದರು.

Edited By : Vinayak Patil
PublicNext

PublicNext

29/06/2025 03:24 pm

Cinque Terre

23.08 K

Cinque Terre

0