", "articleSection": "Politics,Sports,Government", "image": { "@type": "ImageObject", "url": "https://prod.cdn.publicnext.com/s3fs-public/229640-1750155878-jati.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉಡುಪಿ: ರಾಜ್ಯ ಸರಕಾರ ಬೆಂಗಳೂರಿನಲ್ಲಾದ ಕಾಲ್ತುಳಿತ ಪ್ರಕರಣದಿಂದ ಬಚಾವಾಗಲು ಹೊಸದಾಗಿ ಜಾತಿಗಣತಿ ಮಾಡುವ ತೀರ್ಮಾನಕ್ಕೆ ಬಂದಿದೆ ಎಂದು ಮಾಜಿ ಸಚಿವ...Read more" } ", "keywords": "Udupi, Congress, caste census, Sunil Kumar allegations, political diversion, Karnataka news, Chinnaswamy stampede, political controversy", "url": "https://dashboard.publicnext.com/node" } ಉಡುಪಿ : ಕಾಲ್ತುಳಿತ ಪ್ರಕರಣದಿಂದ ಬಚಾವಾಗಲು ಕಾಂಗ್ರೆಸ್‌ನಿಂದ ಹೊಸ ಜಾತಿಗಣತಿ - ಸುನಿಲ್ ಕುಮಾರ್ ಆರೋಪ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕಾಲ್ತುಳಿತ ಪ್ರಕರಣದಿಂದ ಬಚಾವಾಗಲು ಕಾಂಗ್ರೆಸ್‌ನಿಂದ ಹೊಸ ಜಾತಿಗಣತಿ - ಸುನಿಲ್ ಕುಮಾರ್ ಆರೋಪ

ಉಡುಪಿ: ರಾಜ್ಯ ಸರಕಾರ ಬೆಂಗಳೂರಿನಲ್ಲಾದ ಕಾಲ್ತುಳಿತ ಪ್ರಕರಣದಿಂದ ಬಚಾವಾಗಲು ಹೊಸದಾಗಿ ಜಾತಿಗಣತಿ ಮಾಡುವ ತೀರ್ಮಾನಕ್ಕೆ ಬಂದಿದೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಹೊಸ ಜಾತಿ ಗಣತಿ ಮಾಡಲು ಹೇಳಿರುವುದರಿಂದ ಸಿದ್ದರಾಮಯ್ಯ ಅವರಿಗೆ ಭಾರೀ ಮುಖಭಂಗ ಆಗಿದೆ. ಈ ಹಿಂದೆ 10 ವರ್ಷಗಳ ಹಿಂದಿನ ಜಾತಿಗಣತಿಗಾಗಿ ನೂರಾರು ಕೋಟಿ ಖರ್ಚು ಮಾಡಲಾಗಿದೆ. ಈಗ ಮತ್ತೆ ಗಣತಿಗೆ ಹೊರಟಿದ್ದಾರೆ. ಇದರ ಅವಶ್ಯಕತೆ ಇದೆಯೇ ಎಂದರು.

ಕೇಂದ್ರ ಸರಕಾರದ ಜಾತಿ ಗಣತಿಯಲ್ಲಿ ಸುಮಾರು 36 ಪ್ರಶ್ನೆಗಳು ಇರಲಿವೆ.ಅದರಲ್ಲಿ ಶೈಕ್ಷಣಿಕ ಆರ್ಥಿಕ ಸಾಮಾಜಿಕ ಸ್ಥಿತಿಗತಿ ಬಗ್ಗೆ ಗಣತಿ ನಡೆಯಲಿದೆ. ಕೇಂದ್ರ ಗಣತಿ ಮಾಡಿದರೆ ರಾಜ್ಯದ ಜಾತಿಗಣತಿಗೆ ಮಾನ್ಯತೆ ಇಲ್ಲ ಎಂದು ಸುನಿಲ್ ಕುಮಾರ್ ಹೇಳಿದರು.

Edited By : Manjunath H D
PublicNext

PublicNext

17/06/2025 03:54 pm

Cinque Terre

22.69 K

Cinque Terre

1

ಸಂಬಂಧಿತ ಸುದ್ದಿ