", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/229640-1751267703-bjp.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ಮೂರು ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎಂಬ ಬಿಜೆಪಿಯವರ ಹೇಳಿಕೆಯನ್ನು ನಾನು‌ ಗಮನಿಸಿದ್ದೇನೆ. ಅವರದ್ದು ತಿರುಕನ ಕನಸು, ಜನ‌ ಅವರನ್ನು ...Read more" } ", "keywords": "Dinesh Gundurao BJP statement, Karnataka politics BJP, government stability Karnataka, Dinesh Gundurao on BJP, BJP Karnataka future.", "url": "https://dashboard.publicnext.com/node" } ಮಂಗಳೂರು: "ಮೂರು ತಿಂಗಳಲ್ಲಿ ಸರ್ಕಾರ ಬೀಳುತ್ತೆ ಅನ್ನೋದು ಬಿಜೆಪಿಯ ತಿರುಕನ ಕನಸು" – ದಿನೇಶ್ ಗುಂಡೂರಾವ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಮೂರು ತಿಂಗಳಲ್ಲಿ ಸರ್ಕಾರ ಬೀಳುತ್ತೆ ಅನ್ನೋದು ಬಿಜೆಪಿಯ ತಿರುಕನ ಕನಸು" – ದಿನೇಶ್ ಗುಂಡೂರಾವ್

ಮಂಗಳೂರು: ಮೂರು ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎಂಬ ಬಿಜೆಪಿಯವರ ಹೇಳಿಕೆಯನ್ನು ನಾನು‌ ಗಮನಿಸಿದ್ದೇನೆ. ಅವರದ್ದು ತಿರುಕನ ಕನಸು, ಜನ‌ ಅವರನ್ನು ಮನೆಗೆ ಕಳುಹಿಸಿದ್ದಾರೆ ಎಂದು ದ. ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಹೇಳಿದ್ದಾರೆ.

ಅವರ ಪಕ್ಷದಲ್ಲಿ ಏನು ಸರಿಯಿದೆ? ನಮ್ಮ ಬಟ್ಟಲಲ್ಲಿ ಸೊಳ್ಳೆ ಇದ್ರೆ ಅವರ ಬಟ್ಟಲಲ್ಲಿ ಹೆಗ್ಗಣ ಇದೆ. ಮೊದಲು ಅವರನ್ನು ಉಳಿಸುವುದನ್ನು ನೋಡಿಕೊಳ್ಳಲಿ.‌ ನಮ್ಮ ಪಕ್ಷ ಗಟ್ಟಿಯಾಗಿದೆ ಸುಭದ್ರವಾಗಿದೆ ಎಂದರು.

ಸುರ್ಜೇವಾಲ ಅವರು ರಾಜ್ಯದ ಎಲ್ಲಾ ಶಾಸಕರನ್ನು ಭೇಟಿಯಾಗಲಿದ್ದಾರೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮುಂದಿನ‌ ಕ್ರಮ ಏನು ಮಾಡಬೇಕು ಅದನ್ನ ಮಾಡುತ್ತಾರೆ. ರಾಜಕೀಯದಲ್ಲಿ ಅತ್ಯಂತ ದೊಡ್ಡ ಪಕ್ಷ ಬೇರೆ ಬೇರೆಯವರ ಅಭಿಪ್ರಾಯ ಬೇರೆ ಬೇರೆ ಇರುತ್ತದೆ. ನಾನು ಅವರನ್ನೂ ಭೇಟಿಯಾಗುತ್ತೇನೆ ನಮ್ಮ ಅಂತರಿಕ ಸಮಸ್ಯೆ ನಮ್ಮಲ್ಲೇ ಬಗೆಹರಿಸುತ್ತೇವೆ ಎಂದರು.

ಬಿ. ಆರ್ ಪಾಟೀಲ್‌ರವರ ಹೇಳಿಕೆಯ ಬಗ್ಗೆ ಸಿಎಂ ಸಿದ್ದರಾಮಯ್ಯರವರಲ್ಲಿ ಮಾತನಾಡಿದ್ದಾರೆ. ಮನೆಯ ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ ಆಗಿದ್ದರೆ ಆ ಬಗ್ಗೆ ಮಾಹಿತಿ ಕೂಡಲಿ. ಭ್ರಷ್ಟಾಚಾರ ಇಲ್ಲಾ ಎಂದು ಹೇಳಕ್ಕಾಗಲ್ಲ. ಇಡಿ ದೇಶದಲ್ಲಿಯೇ ಭ್ರಷ್ಟಾಚಾರ ಇದೆ. ಇದರ ನಿರ್ಮೂಲನೆ ನಾವು ಮಾಡಬೇಕು. ಕ್ರಾಂತಿ ಇಂತಹ ಪದಗಳು ಸರಿ ಅಲ್ಲ, ಇಂತಹ ಪದಗಳು ಗೊಂದಲ ಸೃಷ್ಟಿ ಮಾಡುತ್ತದೆ. ಯಾವ ಕ್ರಾಂತಿಯೂ ಆಗಲ್ಲ ಸರ್ಕಾರ ಸುಭದ್ರವಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Edited By : Manjunath H D
PublicNext

PublicNext

30/06/2025 12:45 pm

Cinque Terre

12.3 K

Cinque Terre

0

ಸಂಬಂಧಿತ ಸುದ್ದಿ