", "articleSection": "Crime,Government", "image": { "@type": "ImageObject", "url": "https://prod.cdn.publicnext.com/s3fs-public/387839-1751266759-Untitled-design---2025-06-30T123124.040.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ಕರ್ಣಾಟಕ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯು ಕಾರ್ಯನಿರ್ವಾಹಕ ನಿರ್ದೇಶಕ ಶ್ರೀಕೃಷ್ಣನ್ ಹರಿಹರ ಶರ್ಮ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ...Read more" } ", "keywords": "Mangaluru, Karnataka Bank, CEO sacked, controversy, bank's reputation. ", "url": "https://dashboard.publicnext.com/node" } ಮಂಗಳೂರು: ಕರ್ಣಾಟಕ ಬ್ಯಾಂಕ್ ಅಸ್ಮಿತೆಗೆ ತದ್ವಿರುದ್ಧ ಧೋರಣೆ - ಸಿಇಒ ತಲೆದಂಡ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕರ್ಣಾಟಕ ಬ್ಯಾಂಕ್ ಅಸ್ಮಿತೆಗೆ ತದ್ವಿರುದ್ಧ ಧೋರಣೆ - ಸಿಇಒ ತಲೆದಂಡ

ಮಂಗಳೂರು: ಕರ್ಣಾಟಕ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯು ಕಾರ್ಯನಿರ್ವಾಹಕ ನಿರ್ದೇಶಕ ಶ್ರೀಕೃಷ್ಣನ್ ಹರಿಹರ ಶರ್ಮ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ ಎಂದು ಪ್ರಕಟನೆ ತಿಳಿಸಿದೆ.

ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕೃಷ್ಣನ್ ಹರಿಹರ ಶರ್ಮ ಅವರ ರಾಜೀನಾಮೆಯು ಜುಲೈ 15, 2025 ರಿಂದ ಜಾರಿಗೆ ಬರಲಿದೆ. ಅವರು ಮುಂಬೈಗೆ ಸ್ಥಳಾಂತರಗೊಳ್ಳುವ ನಿರ್ಧಾರ ಸೇರಿದಂತೆ ವೈಯಕ್ತಿಕ ಕಾರಣಗಳನ್ನು ತಮ್ಮ ರಾಜಿನಾಮೆಯಲ್ಲಿ ಉಲ್ಲೇಖಿಸಿದ್ದಾರೆ. ಆದ್ದರಿಂದ ಹೊಸ MD & CEO ಮತ್ತು ಕಾರ್ಯನಿರ್ವಾಹಕ ನಿರ್ದೇಶಕರನ್ನು ಗುರುತಿಸಲು ಶೋಧನಾ ಸಮಿತಿಯನ್ನು ರಚಿಸಲಾಗಿದೆ.

ಇದರ ಬೆನ್ನಲ್ಲೇ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಕೂಡಾ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ನಿರ್ದೇಶಕ ಮಂಡಳಿಯು ಅಂಗೀಕರಿಸಿದ್ದು, ಜುಲೈ 31, 2025ರಿಂದ ಅದು ಜಾರಿಗೆ ಬರಲಿದೆ.

ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು CEO ಹಾಗೂ ಹೊಸ ಕಾರ್ಯನಿರ್ವಾಹಕ ನಿರ್ದೇಶಕರ ಹುದ್ದೆಗೆ ಸೂಕ್ತ ಅಭ್ಯರ್ಥಿಗಳನ್ನು ಗುರುತಿಸಲು ಬ್ಯಾಂಕ್ ಶೋಧನಾ ಸಮಿತಿಯನ್ನು ರಚಿಸಿದೆ. ಬ್ಯಾಂಕ್ ಒಬ್ಬ ಅನುಭವಿ ಹಿರಿಯ ಬ್ಯಾಂಕರ್ ಅನ್ನು ಮುಖ್ಯ ಕಾರ್ಯಾಚರಣಾ ಅಧಿಕಾರಿ (COO) ಆಗಿ ನೇಮಿಸಿದೆ, ಅವರು ಜುಲೈ 02, 2025 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹೆಚ್ಚುವರಿಯಾಗಿ, ನಿಯಂತ್ರಕರ ಅನುಮೋದನೆಗೆ ಒಳಪಟ್ಟು ಬದಲಿ ವ್ಯವಸ್ಥೆಗಳನ್ನು ಸಹ ಮಾಡಲಾಗುತ್ತಿದೆ.

ಕರ್ಣಾಟಕ ಬ್ಯಾಂಕಿನ ಶತಮಾನೋತ್ಸವ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆದಾಗ ಶ್ರೀಕೃಷ್ಣನ್‌ ಅನುಮೋದನೆಯಲ್ಲಿ ಜಾಹಿರಾತು ಪ್ರಕಟಗೊಂಡಿತ್ತು. ಅದರಲ್ಲಿ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಮಹಿಳೆಯ ಹಣೆಯಲ್ಲಿ ಬಿಂದಿ ಧರಿಸದ ಜಾಹೀರಾತು ನೀಡಲಾಗಿತ್ತು. ಇದು ಬ್ಯಾಂಕ್ ಗ್ರಾಹಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಬ್ಯಾಂಕ್‌ನ ಎಂಡಿ, ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಶ್ರೀಕೃಷ್ಣನ್ ಕನ್ನಡ ವಿರೋಧಿ ಧೋರಣೆ ತಳೆದಿದ್ದರು. ಕನ್ನಡಿಗರಿಂದಲೇ ಸ್ಥಾಪನೆಗೊಂಡ, ಕರ್ನಾಟಕ ಕರಾವಳಿಯ ಹೆಮ್ಮೆಯ ಕರ್ಣಾಟಕ ಬ್ಯಾಂಕ್ ಅದರದ್ದೇ ಆದ ಅಸ್ಮಿತೆ ಹೊಂದಿದೆ. ಕಲೆ, ಸಂಸ್ಕೃತಿಗೆ ತನ್ನದೇ ಕೊಡುಗೆ ನೀಡುತ್ತಿರುವ ಕರ್ಣಾಟಕ ಬ್ಯಾಂಕ್‌ನ ಧೈಯ ಉದ್ದೇಶಗಳಿಗೆ ತದ್ವಿರುದ್ಧವಾದ ಧೋರಣೆಯನ್ನು ಶ್ರೀಕೃಷ್ಣನ್ ಹೊಂದಿದ್ದರು ಎಂಬ ಆರೋಪವಿದೆ.

ಮುಖ್ಯವಾಗಿ ಕನ್ನಡ ವಿರೋಧಿ ಧೋರಣೆ ತಳೆದಿದ್ದ ಶ್ರೀಕೃಷ್ಣನ್, ಬ್ಯಾಂಕಿನ ನೇಮಕಾತಿಗಳಲ್ಲೂ ಕನ್ನಡಿಗರನ್ನು ದೂರ ಇರಿಸುವ ಪ್ರಕ್ರಿಯೆ ನಡೆಸಿದ್ದರು. ಡಿಜಿಎಂ, ಜಿಎಂಗಳ ನೇಮಕಾತಿಯಲ್ಲೂ ನಿರ್ದೇಶಕ ಮಂಡಳಿಯ ಸೂಚನೆ ಧಿಕ್ಕರಿಸಿ ಸ್ವಜನಪಕ್ಷಪಾತ ನಡೆಸುತ್ತಿದ್ದ ಆರೋಪ ವ್ಯಕ್ತವಾಗಿದೆ. ನಮ್ಮ ಕರ್ಣಾಟಕ ಬ್ಯಾಂಕ್ ನಾಡಿನಾದ್ಯಂತ..' ಎಂದಿದ್ದ ಸ್ಲೋಗನ್‌ನನ್ನು 'ಭಾರತ್ ಕಾ ಕರ್ಣಾಟಕ ಬ್ಯಾಂಕ್' ಎಂದು ಬದಲಾಯಿಸಿ ಕನ್ನಡ ವಿರೋಧಿ ಮಾನಸಿಕತೆ ಮೆರೆದಿದ್ದರು.

ಕರ್ಣಾಟಕ ಬ್ಯಾಂಕ್ ಎಂಡಿ, ಸಿಇಒ ಆಗಿದ್ದರೂ ಕನ್ನಡಿಗರ ವಿರೋಧ ಕಟ್ಟಿಕೊಂಡಿದ್ದಲ್ಲದೆ, ಬ್ಯಾಂಕಿನ ಬಗೆಗಿನ ಪ್ರಚಾರದ ಜವಾಬ್ದಾರಿಯನ್ನು ಕನ್ನಡಿಗರ ಕೈಯಿಂದ ಕಿತ್ತು ಮುಂಬೈ ಕಂಪನಿಯೊಂದಕ್ಕೆ ನೀಡಿದ್ದರು. ಇದು ಕೂಡ ನಿರ್ದೇಶಕ ಮಂಡಳಿಯ ಅಸಮಾಧಾನಕ್ಕೆ ಕಾರಣವಾಗಿತ್ತು.

Edited By : Abhishek Kamoji
PublicNext

PublicNext

30/06/2025 12:29 pm

Cinque Terre

9.09 K

Cinque Terre

0

ಸಂಬಂಧಿತ ಸುದ್ದಿ