ಬೆಂಗಳೂರು : ಸಿಗಂದೂರು ಸೇತುವೆ ಉದ್ಘಾಟನೆಗೆ ಸಿಎಂಗೆ ಬರಬೇಡ ಅಂದಿದ್ದೆ ಯಡಿಯೂರಪ್ಪ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಈ ಮೂಲಕ ಸಿಗಂದೂರು ಸೇತುವೆ ಶಿಷ್ಟಾಚಾರ ಜಟಾಪಟಿಗೆ ಯತ್ನಾಳ್ ಟ್ವಿಸ್ಟ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಸಿಗಂದೂರು ಸೇತುವೆಯಲ್ಲಿ ಶಿಷ್ಟಾಚಾರ ಪಾಲನೆ ಅನ್ನೋದು ಒಂದು ನೆಪ. ಯಡಿಯೂರಪ್ಪ – ಸಿಎಂ ಸಿದ್ದರಾಮಯ್ಯ ಮಧ್ಯೆ ಅಡ್ಜಸ್ಟ್ಮೆಂಟ್ ಆಗಿತ್ತು. ಸಿಎಂಗೆ ನೀವೂ ಬರಬೇಡಿ, ನಿಮ್ಮವರೂ ಬರೋದು ಬೇಡ ಎಂದಿದ್ದರು. ಈ ಮೂಲಕ ತಮ್ಮ ಹಾಗೂ ಸಿದ್ದರಾಮಯ್ಯ ನಡುವೆ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಇಲ್ಲ ಅಂತ ತೋರಿಸಿಕೊಳ್ಳೋದು ಯಡಿಯೂರಪ್ಪ ಉದ್ದೇಶ ಆಗಿತ್ತು ಎಂದಿದ್ದಾರೆ
ಅಡ್ಜಸ್ಟ್ ಮೆಂಟ್ ಇಲ್ಲ ಅಂತ ತೋರಿಸಿಕೊಂಡು ತಮ್ಮ ಮಗ ರಾಜ್ಯಾಧ್ಯಕ್ಷನಾಗಿ ಮುಂದುವರಿಯಲಿ ಎಂಬುದು ಅವರ ಉದ್ದೇಶ. ಈ ಅಪ್ಪ-ಮಗನಿಗೂ ಸಿದ್ದರಾಮಯ್ಯಗೂ ಹೊಂದಾಣಿಕೆ ಇದೆ. ರಾಜ್ಯಾಧ್ಯಕ್ಷ ಆಗಿಯೂ ವಿಜಯೇಂದ್ರ ಮುಂದುವರಿತಾರೆ. ಅಮೇರಿಕ ಅಧ್ಯಕ್ಷರಾಗಿಯೂ ವಿಜಯೇಂದ್ರ ಅವರೇ ಮುಂದುವರಿತಾರೆ ಎಂದು ವ್ಯಂಗ್ಯವಾಡಿದ್ದಾರೆ.
PublicNext
17/07/2025 11:00 pm