ಮಂಡ್ಯ : ಕನ್ನಡದ ವಿಚಾರದಲ್ಲಿ ಬಾನು ಮುಷ್ತಾಕ್ ರಿಜರ್ವೇಷನ್ ಕೇಳಿದ್ದಾರೆ. ಅರಿಶಿನ ಕುಂಕುಂಮ ಭುವನೇಶ್ವರಿಯನ್ನು ಪೀಠದಲ್ಲಿ ಕುಳ್ಳಿರಿಸುವ ಬಗ್ಗೆ ರಿಜರ್ವೇಷನ್ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅವರಿಗೆ ಹಿಂದೂ ಧರ್ಮದಲ್ಲಿ ರಿಜರ್ವೆಷನ್ ಬೇಕಾ ಎಂಬುದನ್ನ ಸ್ಪಷ್ಟಪಡಿಸಿ ದಸರಾ ಉದ್ಘಾಟನೆ ನೆರವೇರಿಸಲಿ ಎಂದು ಜಾತ್ಯಾತೀತ ಜನತಾದಳ ಪಕ್ಷದ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಮಾತನಾಡಿದ ಅವರು ಅವರು ಬೂಕರ್ ಪ್ರಶಸ್ತಿ ಪಡೆದವರು ಹಾಗಾಗಿ ಅವರನ್ನ ಉದ್ಘಾಟನೆ ಆಹ್ವಾನಿಸಲಾಗಿದೆ. ಹಿಂದೆ ನಿಸಾರ್ ಅಹಮದ್ ಮತ್ತಿತರರು ದಸರಾ ಉದ್ಘಾಟನೆ ಮಾಡಿದ್ದಾರೆ ಆದ್ರೆ ಇವರು ತಾವೇ ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆ ನಾವು ಯೋಚನೆ ಮಾಡಲೇಬೇಕು ಸರ್ಕಾರ ಕೂಡಾ ಯೋಚನೆ ಮಾಡ್ಲಿ ಅಂತ ಹೇಳಿದ್ರು.
PublicNext
30/08/2025 03:09 pm