", "articleSection": "Cultural Activity,News,Religion", "image": { "@type": "ImageObject", "url": "https://prod.cdn.publicnext.com/s3fs-public/421698-1756561877-019~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Padmashree" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಆರತಿಯ ಗಂಟೆಗಳು, ಶಂಖದ ನಾದ, ಮಂತ್ರಗಳ ಪಠಣ ಮತ್ತು ಆರತಿಯ ದೀಪಗಳಿಂದ ವಾತಾವರಣ ಭಕ್ತಿಮಯವಾಗಿತ್ತು. ಕಾಶಿಯಲ್ಲಿ ಮಾತ್ರ ನೋಡಲು ಸಿಗುತ...Read more" } ", "keywords": "Bengaluru,Kashi Ganga Aarti,Ganga Aarti,tradition,religious ceremony,ritual,spiritual,local news,Karnataka,temple", "url": "https://dashboard.publicnext.com/node" } ಬೆಂಗಳೂರು: ಗಣೇಶ ಚತುರ್ಥಿಗೆ ಕಾಶಿ ಸ್ಪರ್ಶ- ವಿಶೇಷ ಗಂಗಾ ಆರತಿ ನೆರವೇರಿಸಿದ ಪಂಡಿತರು ​
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಣೇಶ ಚತುರ್ಥಿಗೆ ಕಾಶಿ ಸ್ಪರ್ಶ- ವಿಶೇಷ ಗಂಗಾ ಆರತಿ ನೆರವೇರಿಸಿದ ಪಂಡಿತರು ​

ಬೆಂಗಳೂರು: ಆರತಿಯ ಗಂಟೆಗಳು, ಶಂಖದ ನಾದ, ಮಂತ್ರಗಳ ಪಠಣ ಮತ್ತು ಆರತಿಯ ದೀಪಗಳಿಂದ ವಾತಾವರಣ ಭಕ್ತಿಮಯವಾಗಿತ್ತು. ಕಾಶಿಯಲ್ಲಿ ಮಾತ್ರ ನೋಡಲು ಸಿಗುತ್ತಿದ್ದ ಅಪರೂಪದ ದೃಶ್ಯವನ್ನು ತಮ್ಮೂರಿನಲ್ಲೇ ನೋಡುವ ಅವಕಾಶ ಸಿಕ್ಕಿದ್ದು ಮಹಾಲಕ್ಷ್ಮಿಪುರಂನ ಶ್ರೀ ಶಿವಪುತ್ರ ಯುವಕರ ಸಂಘದ ಕಡೆಯಿಂದ ಆಯೋಜನೆಗೊಂಡ 8ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ.

ಗಣೇಶ ಚತುರ್ಥಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಆದರೆ, ಈ ಬಾರಿಯ ಹಬ್ಬಕ್ಕೆ ಮಹಾಲಕ್ಷ್ಮೀಪುರಂ ಒಂದು ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಇಂದು ಬೆಳಗ್ಗೆ ಗಣೇಶ ಪ್ರತಿಷ್ಠಾಪನೆ ಮತ್ತು ಹೋಮ ಕಾರ್ಯಕ್ರಮ ನಡೆದಿದ್ದು, ಬಳಿಕ ಕಾಶಿಯಿಂದ ಆಗಮಿಸಿದ ಗಂಗಾ ಆರತಿ ಪಂಡಿತರ ತಂಡವು ಇಲ್ಲಿ ಗಂಗಾ ಆರತಿಯನ್ನು ನೆರವೇರಿಸಿತು. ಬಳಿಕ ಅನ್ನದಾನ ಜರುಗಿತು.

ಒಟ್ಟಾರೆ, ಬೆಂಗಳೂರಿನ ಮಹಾಲಕ್ಷ್ಮಿಪುರಂನಲ್ಲಿ 8ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು, ಕಾಶಿಯ ಗಂಗಾ ಆರತಿಯನ್ನು ನೇರವಾಗಿ ಇಲ್ಲಿ ನೋಡಿದ ಭಕ್ತರು ಪುಳಕಿತರಾದರು. ನೂರಾರು ಜನರು ಈ ಅಪೂರ್ವ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ.

Edited By : Suman K
PublicNext

PublicNext

30/08/2025 07:21 pm

Cinque Terre

24.39 K

Cinque Terre

0

ಸಂಬಂಧಿತ ಸುದ್ದಿ