ಕೊಪ್ಪಳ: 37 ನೆಯ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತದಿಂದ ಬೃಹತ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ರಸ್ತೆಯಲ್ಲಿ ಸುರಕ್ಷತೆ ಹೇಗಿರಬೇಕು ಈ ಎಲ್ಲಾ ವಿಚಾರಗಳ ಅರಿವು ಮೂಡಿಸುವ ಪ್ರಯತ್ನವಾಗಿತ್ತು.
ಗವಿಮಠದಿಂದ ಅಶೋಕಾ ವೃತ್ತದವರೆಗೂ ಜಾಥಾ ನಡೆಯುತ್ತಿದೆ. ಈ ಜಾಥಾಕ್ಕೆ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಚಾಲನೆ ನೀಡಿದರು. ಕೊಪ್ಪಳ ಜಿಲ್ಲಾಧಿಕಾರಿ ಡಾ ಸುರೇಶ ಇಟ್ನಾಳ. ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ, ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ನ್ಯಾ ಮಹಾಂತೇಶ ದರಗದ ಸೇರಿ ಹಲವರು ಜಾಥಾದಲ್ಲಿ ಭಾಗವಹಿಸಿದ್ದರು. ಜನರು ಕೂಡ ಜಾಥಾವನ್ನು ರಸ್ತೆಯಲ್ಲಿ ನೋಡಿದ ದೃಶ್ಯ ಕಂಡು ಬಂತು.
PublicNext
23/01/2026 02:08 pm
LOADING...