ಕೊಪ್ಪಳ ತಾಲೂಕಿನ ಶಹಾಪುರ ಗ್ರಾಮದಲ್ಲಿ ಕೋತಿಗಳ ಉಪಟಳದಿಂದ ಜನರು ಬೇಸತ್ತಿದ್ದರು. ಗ್ರಾಮದಲ್ಲಿ ಕೋತಿಳು ಮನೆಯೊಳಗೆ ನುಗ್ಗಿ ಭಯ ಹುಟ್ಟಿಸಿವೆ. ಮಕ್ಕಳು ಹಾಗೂ ವೃದ್ಧರ ಮೇಲೆ ದಾಳಿ ಮಾಡುತ್ತಿವೆ. ಈ ಮಧ್ಯೆ ಒಂದು ಕೋತಿ ಜನರ ಮೇಲೆರಗಿ ಕಚ್ಚುತ್ತಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕೋತಿಯನ್ನು ಅರಣ್ಯ ಇಲಾಖೆಯವರು ಬೋನಿನಲ್ಲಿಡಿದು ಗುಡ್ಡ ಪ್ರದೇಶಕ್ಕೆ ಬಿಟ್ಟಿದ್ದಾರೆ. ಇದರಿಂದ ಶಹಾಪುರ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
Kshetra Samachara
26/01/2026 10:55 pm
LOADING...