ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು ರೆಕಾರ್ಡ್ ರೂಂನಲ್ಲಿ ಜೆರಾಕ್ಸ್ ಪೇಪರ್ 'ಬರಗಾಲ': ರೈತರ ಆಕ್ರೋಶ

ತುಮಕೂರು ತಾಲ್ಲೂಕು ಕಚೇರಿಯ ಆಡಳಿತ ಸಂಪೂರ್ಣ ಹದಗೆಟ್ಟಿದೆ, ತಾಲ್ಲೂಕು ಕಚೇರಿ ಉಸ್ತುವಾರಿಯಲ್ಲಿರುವ ಸರ್ಕಾರಿ ಅಭಿಲೇಖಾಲಯದಲ್ಲಿ ಮಾಹಿತಿ ಪಡೆಯಲು ರೈತರೇ ಹಣ ಕೊಟ್ಟು ಪೇಪರ್ ಖರೀದಿಸಿ ಜೆರಾಕ್ಸ್ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.

ತುಮಕೂರು ತಾಲ್ಲೂಕು ಕಚೇರಿಯಲ್ಲಿರುವ ಸರ್ಕಾರಿ ಅಭಿಲೇಕಾಲಯದಲ್ಲಿ ಜೆರಾಕ್ಸ್ ಪೇಪರ್ ಗೂ ಬರ ಬಂದಿದೆ,ರೈತರೇ ಜೆರಾಕ್ಸ್ ಪೇಪರ್ ತಂದು ಮಾಹಿತಿ ಪಡೆಯುವ ಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ.

ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುತ್ತಿರುವುದು ಉತ್ತಮ ಬೆಳವಣಿಗೆಯಾದರೂ,ತಮ್ಮದೇ ಕಚೇರಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಅಭಿಲೇಕಾಲಯದಲ್ಲಿ ಜೆರಾಕ್ಸ್ ಪೇಪರ್ ಗೆ ಬರ ಬಂದು ರೈತರಿಂದ ಜೆರಾಕ್ಸ್ ಪೇಪರ್ ತರಿಸಿಕೊಳ್ಳುತ್ತಿರುವುದು ನಿಜಕ್ಕೂ ಶೋಚನೀಯವಾದುದು.

ಜಿಲ್ಲಾಧಿಕಾರಿಗಳು ರೆಕಾರ್ಡ್ ರೂಂ ಗೆ ಭೇಟಿ ಸಮಸ್ಯೆ ಬಗೆಹರಿಸಲಿ ಎಂದು ರೈತರು ಹಾಗೂ ಸಾರ್ವಜನಿಕರ ಆಗ್ರಹವಾಗಿದೆ....

Edited By : Vinayak Patil
PublicNext

PublicNext

03/02/2026 09:08 pm

Cinque Terre

7.17 K

Cinque Terre

0

ಸಂಬಂಧಿತ ಸುದ್ದಿ