ಮೈಸೂರು : ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಗೆ ಹೋಗಿದ್ದಂತಹ ಪ್ರವಾಸಿಗರಿಗೆ ಹುಲಿರಾಯನ ದರ್ಶನವಾಗಿದೆ. ನಾಗರಹೊಳೆ ಬಂಡೀಪುರದಲ್ಲಿ ಇತ್ತೀಚೆಗೆ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು ಒಂದಲ್ಲ ಒಂದು ಕಡೆ ಸಫಾರಿಗೆ ಬರುವವರಿಗೆ ಹುಲಿಗಳು ದರ್ಶನ ಕೊಡುತ್ತಿದೆ.
ಬೇಸಿಗೆಯ ತಾಪ ಹೆಚ್ಚಾಗಿರುವ ಕಾರಣ ಕೆರೆಯಲ್ಲಿ ನೀರು ಕುಡಿಯಲು ಹುಲಿ ಬಂದಂತಹ ಸಂದರ್ಭದಲ್ಲಿ ಭರ್ಜರಿಯಾಗಿ ಪೋಸ್ ಕೊಟ್ಟಿದೆ. ಗಜ ಗಾಂಭೀರ್ಯದಿಂದ ನಡೆದುಕೊಂಡು ಬಂದು ನೀರು ಕುಡಿಯುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ
PublicNext
27/04/2026 11:01 am
LOADING...