ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಚಿವ ಸ್ಥಾನ ಕೈತಪ್ಪಿದ ನೋವು: ಜಮೀರ್‌ಗೆ ಡಿಸಿಎಂ ಪಟ್ಟಕ್ಕೆ ಅಭಿಮಾನಿಗಳ ಕ್ಯಾಂಡಲ್ ಸಮರ!

ರಾಮನಗರ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಲ್ಪಸಂಖ್ಯಾತ ನಾಯಕ ಜಮೀರ್ ಅಹಮದ್ ರವರಿಗೆ ಸಚಿವ ಸ್ಥಾನ ಕೈತಪ್ಪಿರುವ ಹಿನ್ನೆಲೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ನಗರದ ಶೇರು ಹೋಟೆಲ್ ಸರ್ಕಲ್ ನಲ್ಲಿ ಜಮೀರ್ ಅಭಿಮಾನಿಗಳು ಕ್ಯಾಂಡಲ್ ಹಿಡಿದು ಜಮೀರ್ ರವರಿಗೆ ಸಚಿವ ಸ್ಥಾನ ಕೊಡಬೇಕು, ಡಿಸಿಎಂ ಮಾಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಗೆ ಒತ್ತಾಯಿಸಿದರು.

ಜಮೀರ್ ಅಭಿಮಾನಿ ಬಳಗದ ಗೋರು ಹಾಗೂ ಸ್ನೇಹಿತರು ಸೇರಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿಎಂ ಡಿ.ಕೆ.ಶಿವಕುಮಾರ್ ರವರಿಗೆ ಒತ್ತಾಯಿಸಿದರು. ಅಲ್ಪಸಂಖ್ಯಾತರ ನಾಯಕರಾಗಿ ಜಮೀರ್ ಇದ್ದಾರೆ, ಅವರಿಗೆ ಸೂಕ್ತ ಸ್ಥಾನಮಾನ ಕೊಡಬೇಕೆಂದು ಒತ್ತಾಯಿಸಿದರು.

Edited By : Shivu K
PublicNext

PublicNext

07/06/2026 03:05 pm

Cinque Terre

7.18 K

Cinque Terre

0