", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1750785345-sayu.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ಯಡಿಯೂರಪ್ಪ ಸಾಯೋದ್ರಿಂದ ಕರ್ನಾಟಕಕ್ಕೆ ಒಳ್ಳೆಯದು ಆಗತ್ತೆ ಅನ್ನೋದಾದ್ರೆ ಆಗಲಿ. ಬಿಜೆಪಿ ಸಾರಥ್ಯ ನಮ್ಮ ಕೈಗೆ ಕೊಡಿ 150 ಸೀಟ್ ತರುತ...Read more" } ", "keywords": "Vijayapura, BJP leadership, Yatnall, BSY, Karnataka elections.", "url": "https://dashboard.publicnext.com/node" }
ವಿಜಯಪುರ: ಯಡಿಯೂರಪ್ಪ ಸಾಯೋದ್ರಿಂದ ಕರ್ನಾಟಕಕ್ಕೆ ಒಳ್ಳೆಯದು ಆಗತ್ತೆ ಅನ್ನೋದಾದ್ರೆ ಆಗಲಿ. ಬಿಜೆಪಿ ಸಾರಥ್ಯ ನಮ್ಮ ಕೈಗೆ ಕೊಡಿ
150 ಸೀಟ್ ತರುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೆ ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಈಗ ಬಿಜೆಪಿಯಲ್ಲಿ ಇಬ್ಬರು ರಾಜ್ಯಾಧ್ಯಕ್ಷರು ಇದ್ದಾರೆ. ಅಪ್ಪ ಸೂಪರ್ ಅಧ್ಯಕ್ಷ, ಮಗ ಕಂಡೆಮ್ ಅಧ್ಯಕ್ಷ, ಬಿಜೆಪಿ ಉದ್ಧಾರಕ್ಕೆ ಬಿಎಸ್ವೈ ಪ್ರವಾಸ ಮಾಡ್ತಿಲ್ಲ, ಮಗ ಸಿಎಂ ಆಗಲಿ ಎಂದು ಮಾಡ್ತಿದ್ದಾರೆ.
ಮೊದಲು ಮಗನ ರಾಜೀನಾಮೆ ಕೊಡಿಸಲಿ ಕರ್ನಾಟಕದಲ್ಲಿ ಬಿಜೆಪಿ ಪುನರುಜ್ಜೀವನ ಆಗಬೇಕಾದ್ರೆ ಬಿಎಸ್ವೈ ಮಗನನ್ನ ಮನೆಯಲ್ಲಿ ಇಟ್ಟುಕೊಳ್ಳಲಿ. ವಿಜಯೇಂದ್ರ ಬಳಿ ಕ್ರಿಮಿನಲ್ ಬುದ್ಧಿ ಇದೆ. ಡುಪ್ಲಿಕೆಟ್ ಸಹಿ, ಸಿ.ಡಿ ಮಾಡೋದು ವಿಜಯೇಂದ್ರನ ಕೆಟ್ಟ ಚಟ. ಇಂಥವ್ರು ರಾಜ್ಯಾಧ್ಯಕ್ಷ, ಸಿಎಂ ಆದ್ರೆ ಉದ್ದಾರ ಆಗಲ್ಲ. ಬಿಜೆಪಿ ರಾಜ್ಯಾಧ್ಯಕ್ಷನೇ ಕ್ಯಾನ್ಸರ್. ಮಗನಿಂದ ಬಿಜೆಪಿ ಹಾಳಾಗ್ತಿದೆ. ಕ್ಯಾನ್ಸರ್ ಗಡ್ಡೆಯನ್ನ ಕತ್ತರಿಸಿ ತೆಗೆಯಬೇಕಿದೆ. ವಿಜಯೇಂದ್ರ ತೆಗೆದರೆ ಯಡಿಯೂರಪ್ಪ ಪ್ರವಾಸ ಮಾಡ್ತಾರಾ ನೋಡಿ,
ವಿಜಯೇಂದ್ರ ಅಧ್ಯಕ್ಷ ಸ್ಥಾನದಿಂದ ಇಳಿಸಿದ್ರೆ ಒಂದು ವಾರದಲ್ಲಿ ಸಾಯ್ತೀನಿ ಎಂದಿದ್ದಾರೆ. ಯಡಿಯೂರಪ್ಪ ಸಾಯೋದ್ರಿಂದ, ಹುಟ್ಟೋದ್ರಿಂದ ಕರ್ನಾಟಕದ ಭವಿಷ್ಯ ನಿಲ್ಲಬಾರದು. ಬಿಜೆಪಿ ನಮ್ಮ ಕೈಯ್ಯಲ್ಲಿ ಕೊಟ್ರೆ 150 ಸೀಟ್ ತರ್ತೀವಿ ಎಂದು ಹರಿಹಾಯ್ದಿದ್ದಾರೆ.
PublicNext
24/06/2025 10:46 pm