", "articleSection": "Politics,Crime,Government,News", "image": { "@type": "ImageObject", "url": "https://prod.cdn.publicnext.com/s3fs-public/421698-1750759684-Youtube-HD.00_34_36_22.Still2437~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ರಾಜ್ಯ ರಾಜಕೀಯದಲ್ಲಿ ವಸತಿ ಇಲಾಖೆಯ ಹಗರಣ ಸಂಚಲನ ಸೃಷ್ಟಿಸಿದೆ ಇದರ ಮದ್ಯ ವಿಜಯಪುರ ಜಿಲ್ಲೆಯಲ್ಲಿ ಮತ್ತಷ್ಟು ಆಡಿಯೋಗಳು ವೈರಲ್ ಆಗಿದ್...Read more" } ", "keywords": "Vijayapura housing department corruption, more audio viral Vijayapura, corruption in housing department, Vijayapura audio leak corruption, viral audio corruption Vijayapura, housing department scam Vijayapura, Vijayapura corruption news, audio evidence corruption, Vijayapura illegal activities, housing scheme corruption Karnataka", "url": "https://dashboard.publicnext.com/node" } ವಿಜಯಪುರ: ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತಷ್ಟು ಆಡಿಯೋ ವೈರಲ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತಷ್ಟು ಆಡಿಯೋ ವೈರಲ್

ವಿಜಯಪುರ: ರಾಜ್ಯ ರಾಜಕೀಯದಲ್ಲಿ ವಸತಿ ಇಲಾಖೆಯ ಹಗರಣ ಸಂಚಲನ ಸೃಷ್ಟಿಸಿದೆ ಇದರ ಮದ್ಯ ವಿಜಯಪುರ ಜಿಲ್ಲೆಯಲ್ಲಿ ಮತ್ತಷ್ಟು ಆಡಿಯೋಗಳು ವೈರಲ್ ಆಗಿದ್ದು ಭಾರೀ ಸಂಚಲನ ಸೃಷ್ಟಿಸಿವೆ.

ಹೌದು ! ವಿಜಯಪುರದ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಅವರ ಆಪ್ತನ ಹೆಸರಿನಲ್ಲಿ ಆಡಿಯೋ ಒಂದು ಹರಿದಾಡುವ ಮೂಲಕ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈಗ ಅದೇ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಬ್ಬರು ಸದಸ್ಯರಿಂದ ಹಣ ವಸೂಲಿ ಕುರಿತು ನಡೆದಿರುವ ಆಡಿಯೋ ಸಂಭಾಷಣೆ ಇದೀಗ ವೈರಲ್ ಆಗಿವೆ.

ರಾಂಪುರ ಪಿ ಎ, ಪಂಚಾಯತಿ ವ್ಯಾಪ್ತಿಯ ಗಣಿಹಾರ, ಗಣಿಹಾರ ತಾಂಡಾ, ರಾಂಪುರ, ಬೆನಕವಟಗಿ ಹಾಗೂ ಬೆನಕವಟಗಿ ತಾಂಡಾ ಬಬಲೇಶ್ವರ ಗ್ರಾಮಗಳ ಫಲಾನುಭವಿಗಳಿಂದ ಹಣ ಪಡೆದಿರುವ ಆರೋಪಗಳು ಕೇಳಿ ಬಂದಿವೆ.

ಪಂಚಾಯತಿ ಸದಸ್ಯೆಯ ಪತಿ ಪಿಂಟು ರಾಠೋಡ್ ಹಾಗೂ ಪಂಚಾಯಿತಿ ಸದಸ್ಯನ ಮಗ ಮಹ್ಮದ ಇಂಚಗೇರಿ ಎಂಬಾತರು ಪಂಚಾಯತಿಯ ವಾಟ್ಸ್ ಅಪ್ ಗ್ರೂಪ್‌ನಲ್ಲಿ ಮಾತನಾಡಿ ಆಡಿಯೋ ಹರಿ ಬಿಟ್ಟಿದ್ದಾರೆ. ನನಗೆ ಹೇಳಿಯೇ ಫಲಾನುಭವಿಗಳ ಆಯ್ಕೆ ಮಾಡಬೇಕು ಎಂದು ಪಿಂಟು ರಾಠೋಡ ಹೇಳಿದರೆ ಹಾಗಾದರೆ 40,000 ಕೊಡು ಅಷ್ಟು ಕೊಟ್ಟರೆ ಮಾತ್ರ ಫಲಾನುಭವಿಗಳ ಆಯ್ಕೆಯಾಗುತ್ತದೆ ಮಹ್ಮದ ಬಹಿರಂಗವಾಗಿ ಮಾತನಾಡುವ ಆಡಿಯೋಗಳು ವೈರಲ್ ಆಗಿವೆ.

ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮನೆಗಳ ಹಂಚಿಕೆಗೆ ಹಣ ಪಡೆಯಲಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೂ ಇದರಲ್ಲಿ ಪಾಲು ಇರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದು ಆಡಿಯೋ ಸಂಭಾಷಣೆಗಳ ಕುರಿತು ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಒಟ್ಟಾರೆಯಾಗಿ ರಾಜ್ಯದಲ್ಲಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಹಗರಣ, ವಸತಿ ಯೋಜನೆ ಹಗರಣ ಸೇರಿದಂತೆ ವಿವಿಧ ಇಲಾಖೆಗಳ ಅನುದಾನ ದುರ್ಬಳಕೆಯ ಆರೋಪಗಳು ಕೇಳಿ ಬರುತ್ತಿವೆ ಕಾಂಗ್ರೆಸ್ ಸರ್ಕಾರಕ್ಕೆ ಮುಜಗುರ ಉಂಟು ಮಾಡುತ್ತಿದ್ದು, ವಿಪಕ್ಷಗಳಿಗೆ ಹೊಸ ಅಸ್ತ್ರಗಳು ಸಿಕ್ಕಂತಾಗಿದೆ. ಇನ್ನು ರಾಂಪೂರ ಪ್ರಕರಣ ವಿಚಾರವಾಗಿ ಸಂಬಂಧ ಪಟ್ಟ ಮೇಲಾಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನ ಕಾದು ನೋಡಬೇಕಿದೆ.

Edited By : Suman K
PublicNext

PublicNext

24/06/2025 03:38 pm

Cinque Terre

20.75 K

Cinque Terre

0

ಸಂಬಂಧಿತ ಸುದ್ದಿ