", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1751180648-WhatsApp-Image-2025-06-29-at-12.34.01-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರದಲ್ಲಿ ನಿನ್ನೆಯಷ್ಟೇ ಸಂಚಲನ ಸೃಷ್ಟಿಸಿದ್ದ ಹಣಕ್ಕಾಗಿ ಒತ್ತೆಯಾಳು ಪ್ರಕರಣ ಸದ್ಯಕ್ಕೆ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಅಪಹರಣಕ್ಕೆ ಒಳಗಾ...Read more" } ", "keywords": "Vijayapura government job scam, hostage situation, lakhs lost, fake government jobs, employment fraud. ", "url": "https://dashboard.publicnext.com/node" } ವಿಜಯಪುರ: ಒತ್ತೆಯಾಳು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಸರ್ಕಾರಿ ನೌಕರಿ ಹೆಸರಲ್ಲಿ ಲಕ್ಷ ಲಕ್ಷ ವಂಚನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಒತ್ತೆಯಾಳು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಸರ್ಕಾರಿ ನೌಕರಿ ಹೆಸರಲ್ಲಿ ಲಕ್ಷ ಲಕ್ಷ ವಂಚನೆ

ವಿಜಯಪುರದಲ್ಲಿ ನಿನ್ನೆಯಷ್ಟೇ ಸಂಚಲನ ಸೃಷ್ಟಿಸಿದ್ದ ಹಣಕ್ಕಾಗಿ ಒತ್ತೆಯಾಳು ಪ್ರಕರಣ ಸದ್ಯಕ್ಕೆ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಅಪಹರಣಕ್ಕೆ ಒಳಗಾಗಿದ್ದ ವ್ಯಕ್ತಿಯೇ ವಂಚಕನೆಂದು ತಿಳಿದು ಬಂದಿದೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ನಿವಾಸಿ ಪ್ರಭಾಕರ ಡವಳಗಿ ಎಂಬವರು ಪಡಗಾನೂರು ಗ್ರಾಮದ ಉದಯಕುಮಾರ್ ಬಾವಿಮನಿಯನ್ನು ಕಳೆದ 27 ದಿನಗಳಿಂದ ಒತ್ತೆಯಾಗಿ ಇಟ್ಟುಕೊಂಡು ಮೂವತ್ತೊಂದು ಲಕ್ಷ ಹಣವನ್ನು ಮರಳಿಸುವಂತೆ ಅಪಹರಣ ಮಾಡಿದ್ದಾರೆ ಎಂದು ಉದಯಕುಮಾರ್ ಪತ್ನಿ ರೇಷ್ಮಾ ಹಾಗೂ ಸಹೋದರ ಶಿವಪ್ಪ ಬಾವಿಮನಿ ಆರೋಪ ಮಾಡಿ ಹೈ ಡ್ರಾಮಾ ಸೃಷ್ಟಿಸಿದ್ದರು.

ಆದರೆ ಸದ್ಯ ಈ ಅಪಹರಣ ಪ್ರಕರಣ ಸುಳ್ಳು ಎಂದು ಸಾಬೀತುಪಡಿಸುವ ಸಾಕ್ಷಿಗಳು ಮಾಧ್ಯಮಗಳಿಗೆ ಲಭ್ಯವಾಗಿವೆ. ಯುವಕರಿಗೆ ಸರ್ಕಾರಿ ನೌಕರಿ ಕೊಡಿಸುವದಾಗಿ ಉದಯಕುಮಾರ ವಂಚನೆ ಮಾಡಿದ್ದಾನೆ. ಜಿಲ್ಲೆಯಲ್ಲಿ ಹಲವಾರು ಯುವಕರಿಂದ ಲಕ್ಷ ಲಕ್ಷ ಹಣವನ್ನು ಫೋನ್ ಪೇ, ಆರ್ ಟಿ ಜಿ ಎಸ್ ಮತ್ತು ಚೆಕ್ ಮೂಲಕ ಹಣ ಪಡೆದಿದ್ದಾನೆ, ವಂಚಕ ಉದಯಕುಮಾರ್ ಸರ್ಕಾರಿ ಸುತ್ತೋಲೆಯನ್ನೇ ಡುಪ್ಲಿಕೇಟ್ ಮಾಡಿದ್ದು, ಸಿಎಂ ಸಿದ್ದರಾಮಯ್ಯನವರ ನಕಲಿ‌ ಸಹಿ ಮಾಡಿ ಯುವಕರನ್ನು ವಂಚಿಸಿರುವ ಆರೋಪ ಕೇಳಿ ಬಂದಿದೆ.

ಇನ್ನೂ ವಂಚನೆ ಪ್ರಕರಣ ದಾಖಲಾಗುತ್ತದೆ ಎಂಭ ಭಯದಿಂದ ಉದಯಕುಮಾರ ನಾನು ಕಿಡ್ನ್ಯಾಪ್ ಆಗಿಲ್ಲ ಎಂದು ಹೇಳಿಕೆ ನೀಡಿ ವಿಡಿಯೋ ಹರಿಬಿಟ್ಟಿದ್ದಾನೆ, ಇನ್ನು ನೊಂದ ಕುಟುಂಬಗಳು ನೌಕರಿಗಾಗಿ ಲಂಚ ಪ್ರಕರಣದಲ್ಲಿ ತಾವು ಕೂಡ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎನ್ನುವ ಭಯದಿಂದ ಇಲ್ಲಿಯವರೆಗೆ ದೂರು ದಾಖಲಿಸಿಲ್ಲ ಮತ್ತು ವಂಚಕ ಉದಯಕುಮಾರ್ ಪಡೆದುಕೊಂಡ ಹಣವನ್ನು ಇಂದಲ್ಲ ನಾಳೆ ಮರಳಿಸುವ ಭರವಸೆ ನೀಡುತ್ತಿರುವುದರಿಂದ ಮೌನಕ್ಕೆ ಜಾರಿದ್ದರು.

ಸದ್ಯ ಪ್ರಭಾಕರ ಢವಳಗಿ ಅವರ ವಶದಲ್ಲಿದ್ದ ಉದಯಕುಮಾರನನ್ನ ಬಸವನ ಬಾಗೇವಾಡಿ ಠಾಣೆ ಪೋಲಿಸರು ವಿಚಾರಣೆಗೆ ಒಳಪಡಿಸಿದ್ದಾರೆ ಇತ್ತ ಉದಯಕುಮಾರ ಪತ್ನಿ ರೇಷ್ಮಾ ನನ್ನ ಗಂಡನನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಪ್ರಭಾಕರ ಸೇರಿದಂತೆ ಐವರ ಮೇಲೆ ದೂರು ದಾಖಲಿಸಿದ್ದಾರೆ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿದೂರು ದಾಖಲಾಗುವ ಸಾಧ್ಯತೆ ಇದೆ. ಇನ್ನೂ ಈ ಪ್ರಕರಣವನ್ನು ಪೊಲೀಸರು ಹೇಗೆ ಬಗೆ ಹರಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

-ಮಂಜು ಕಲಾಲ ಪಬ್ಲಿಕ ನೆಕ್ಸ್ಟ ವಿಜಯಪುರ

Edited By : Shivu K
PublicNext

PublicNext

29/06/2025 12:34 pm

Cinque Terre

22.37 K

Cinque Terre

0

ಸಂಬಂಧಿತ ಸುದ್ದಿ