", "articleSection": "Crime,Education,Government", "image": { "@type": "ImageObject", "url": "https://prod.cdn.publicnext.com/s3fs-public/286525-1750080876-WhatsApp-Image-2025-06-16-at-7.03.45-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ಶಾಲಾ–ಕಾಲೇಜುಗಳ ಆವರಣದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ನಿಷೇಧಿಸಲ್ಪಟ್ಟಿದ್ದರೂ ಶಾಲೆಯ ಪ್ರಾಂಶುಪಾಲರೇ ಶಾಲೆಯಲ್ಲಿ ತಂಬ...Read more" } ", "keywords": "Organized in schools and colleges to educate students about tobacco's risks and danger", "url": "https://dashboard.publicnext.com/node" } ವಿಜಯಪುರ: ಶಾಲೆಯಲ್ಲಿಯೇ ತಂಬಾಕು ಸೇವನೆ ಮಾಡಿದ ಪ್ರಾಂಶುಪಾಲ!- ವಿದ್ಯಾದೇಗುಲದಲ್ಲಿಇದೆಂಥ ದುರ್ನಡತೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಶಾಲೆಯಲ್ಲಿಯೇ ತಂಬಾಕು ಸೇವನೆ ಮಾಡಿದ ಪ್ರಾಂಶುಪಾಲ!- ವಿದ್ಯಾದೇಗುಲದಲ್ಲಿಇದೆಂಥ ದುರ್ನಡತೆ

ವಿಜಯಪುರ: ಶಾಲಾ–ಕಾಲೇಜುಗಳ ಆವರಣದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ನಿಷೇಧಿಸಲ್ಪಟ್ಟಿದ್ದರೂ ಶಾಲೆಯ ಪ್ರಾಂಶುಪಾಲರೇ ಶಾಲೆಯಲ್ಲಿ ತಂಬಾಕು ಸೇವನೆ ಮಾಡುವ ಮೂಲಕ ಕೋಟ್ಪಾ ಕಾಯ್ದೆ(ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ)ಯನ್ನು ಉಲ್ಲಂಘನೆ ಮಾಡಿದ್ದಾರೆ!

ಹೌದು! ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಸಮೀಪದ ಟಕ್ಕಳಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಗಣಪತಿ ಗುಪ್ತಾ ಶಾಲೆಯ ಮುಖ್ಯೋಪಾಧ್ಯಾಯರ ಕೋಣೆಯಲ್ಲಿ ಹಾಗೂ ಶಾಲಾ ಆವರಣದಲ್ಲಿ ರಾಜಾರೋಷವಾಗಿ ತಂಬಾಕು ಸೇವನೆ ಮಾಡಿದ್ದಾರೆ. ಪ್ರಾಂಶುಪಾಲರ ತಂಬಾಕು ಸೇವನೆಯ ವಿಡಿಯೋ ಪಬ್ಲಿಕ್ ನೆಕ್ಸ್ಟ್‌ ಗೆ ಲಭ್ಯವಾಗಿದೆ.

ಧೂಮಪಾನ ಹಾಗೂ ತಂಬಾಕಿನ ಇತರೆ ಉತ್ಪನ್ನಗಳ ಸೇವನೆಯು ಆರೋಗ್ಯಕ್ಕೆ ಮಾರಕವಾಗಿದ್ದು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಧೂಮಪಾನದಿಂದ ಸಾರ್ವಜನಿಕರನ್ನು ಹಾಗೂ ಸರ್ಕಾರಿ ಸಿಬ್ಬಂದಿಯನ್ನು ರಕ್ಷಿಸುವ ಉದ್ದೇಶದಿಂದ ಯಾವುದೇ ಸರ್ಕಾರಿ ನೌಕರರು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಕಚೇರಿ ಅವರಣದಲ್ಲಿ ಧೂಮಪಾನ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ರಾಜ್ಯಪತ್ರದ ಮೂಲಕ ಸುತ್ತೋಲೆ ಹೊರಡಿಸಲಾಗಿದೆ.

ಸರ್ಕಾರದ ಸುತ್ತೋಲೆಯನ್ನು ಲೆಕ್ಕಿಸದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಗಣಪತಿ, ಶಾಲೆಯಲ್ಲಿಯೇ ತಂಬಾಕು ಸೇವನೆ ನಿಷೇಧದ ನಾಮಫಲಕದ ಮುಂಭಾಗದಲ್ಲೇ ಕುಳಿತು ತಂಬಾಕು ಸೇವನೆ ಮಾಡುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ.

ಶಾಲೆಯಲ್ಲಿ ಮಕ್ಕಳು ತಪ್ಪು ಮಾಡಿದರೆ ತಿದ್ದಿ ಬುದ್ಧಿ ಹೇಳಬಹುದು. ಆದರೆ, ಶಾಲೆಯ ಪ್ರಾಂಶುಪಾಲರೇ ತಪ್ಪು ಮಾಡಿದರೆ ಏನು ಮಾಡಬೇಕು ಎನ್ನುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.‌

-ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ್ ವಿಜಯಪುರ

Edited By : Shivu K
PublicNext

PublicNext

16/06/2025 07:05 pm

Cinque Terre

27.3 K

Cinque Terre

0

ಸಂಬಂಧಿತ ಸುದ್ದಿ