", "articleSection": "Crime,Government", "image": { "@type": "ImageObject", "url": "https://prod.cdn.publicnext.com/s3fs-public/387839-1751265002-WhatsApp-Image-2025-06-30-at-11.55.43-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಿರ್ಮಾಣಗೊಂಡ 90 ಡಿಗ್ರಿ ಅಪಾಯಕಾರಿ ತಿರುವಿನ ರೈಲ್ವೆ ಮೇಲ್ಸೇತುವೆಯು ಸಾರ್ವಜನಿಕರು ಮತ್ತು ನೆಟ್ಟಿಗರ ಆ...Read more" } ", "keywords": "Bhopal, 90-degree railway bridge, controversy, engineers punished, major blunder. ", "url": "https://dashboard.publicnext.com/node" } ಭೋಪಾಲ್: 90 ಡಿಗ್ರಿ ತಿರುವಿನ ರೈಲ್ವೆ ಸೇತುವೆ ವಿವಾದ - 7 ಇಂಜಿನಿಯರ್‌ಗಳ ತಲೆದಂಡ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೋಪಾಲ್: 90 ಡಿಗ್ರಿ ತಿರುವಿನ ರೈಲ್ವೆ ಸೇತುವೆ ವಿವಾದ - 7 ಇಂಜಿನಿಯರ್‌ಗಳ ತಲೆದಂಡ!

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಿರ್ಮಾಣಗೊಂಡ 90 ಡಿಗ್ರಿ ಅಪಾಯಕಾರಿ ತಿರುವಿನ ರೈಲ್ವೆ ಮೇಲ್ಸೇತುವೆಯು ಸಾರ್ವಜನಿಕರು ಮತ್ತು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಸರ್ಕಾರ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್‌ಗಳು ಸೇರಿದಂತೆ ಒಟ್ಟು 7 ಮಂದಿ ಇಂಜಿನಿಯರ್‌ಗಳ ಅಮಾನತುಗೊಳಿಸಿದ್ದಾರೆ.

ಭೋಪಾಲ್‌ನ ಐಶ್‌ಬಾಗ್ ರೈಲ್ವೆ ಕ್ರಾಸಿಂಗ್ ಬಳಿ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲು ಮಾರ್ಚ್ 2023ರಲ್ಲಿ ಮೇಲ್ಸೇತುವೆ ನಿರ್ಮಾಣ ಆರಂಭವಾಗಿತ್ತು. ಇದು ಮಹಾಮಾಯಿ ಕಾ ಬಾಗ್, ಪುಷ್ಪಾ ನಗರ, ರೈಲ್ವೆ ನಿಲ್ದಾಣ ಪ್ರದೇಶ ಮತ್ತು ನ್ಯೂ ಭೋಪಾಲ್‌ನ್ನು ಸಂಪರ್ಕಿಸುತ್ತದೆ. ಪ್ರತಿದಿನ ಸುಮಾರು 3 ಲಕ್ಷ ಜನರಿಗೆ ಇದು ಉಪಯುಕ್ತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಸುಮಾರು ₹18 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ 648 ಮೀ. ಉದ್ದ ಹಾಗೂ 8.5 ಮೀ. ಅಗಲದ ಈ ಸೇತುವೆಯಲ್ಲಿ ನೇರವಾದ 90 ಡಿಗ್ರಿ ತಿರುವು ಇರುವುದರಿಂದ ವಾಹನ ಚಾಲಕರಿಗೆ ಅಪಾಯಕಾರಿಯಾಗಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ತಲೆದೂರಿದೆ. ತಜ್ಞರ ಅಭಿಪ್ರಾಯಕ್ಕೂ ಇದು ಅಪಾಯಕಾರಿ ತಿರುವು ಎಂದೇ ಸ್ಪಷ್ಟವಾಗಿದೆ.

ಸೇತುವೆ ವಿನ್ಯಾಸದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ‘ಇಂತಹ ಯೋಜನೆಗಳಿಗೆ 10 ವರ್ಷ ತೆಗೆದುಕೊಳ್ಳುವಂತ ಸರ್ಕಾರಗಳೂ, ಮೆರಿಟ್ ಇಲ್ಲದ ಇಂಜಿನಿಯರ್‌ಗಳೂ ಇದರ ಹೊಣೆಗಾರರು ಎಂದು ಬಳಕೆದಾರರು ಟೀಕಿಸಿದ್ದಾರೆ.

ಈ ಹಿನ್ನೆಲೆ ಮಧ್ಯ ಪ್ರದೇಶ ಸರ್ಕಾರ ಏಳು ಇಂಜಿನಿಯರ್‌ಗಳನ್ನು ಅಮಾನತು ಮಾಡಿದ್ದು, ತನಿಖೆ ಮುಂದುವರಿಯುತ್ತಿದೆ.

Edited By : Abhishek Kamoji
PublicNext

PublicNext

30/06/2025 12:00 pm

Cinque Terre

53.39 K

Cinque Terre

2

ಸಂಬಂಧಿತ ಸುದ್ದಿ