", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1750945479-lp.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ಕಳೆದ ತಿಂಗಳು ಮೇ 23ರಿಂದ 25ರ ಮಧ್ಯರಾತ್ರಿಯಲ್ಲಿ ವಿಜಯಪುರ ಜಿಲ್ಲೆಯ ಮನಗೂಳಿ ಗ್ರಾಮದ ಕೆನರಾ ಬ್ಯಾಂಕ್ ನಲ್ಲಿ ಕಳ್ಳತನ ನಡೆದಿತ್ತು. ಈ...Read more" } ", "keywords": "Bijapur bank robbery, police arrest bank thieves, Bijapur police success, bank robbery case cracked, Bijapur crime news", "url": "https://dashboard.publicnext.com/node" }
ವಿಜಯಪುರ: ಕಳೆದ ತಿಂಗಳು ಮೇ 23ರಿಂದ 25ರ ಮಧ್ಯರಾತ್ರಿಯಲ್ಲಿ ವಿಜಯಪುರ ಜಿಲ್ಲೆಯ ಮನಗೂಳಿ ಗ್ರಾಮದ ಕೆನರಾ ಬ್ಯಾಂಕ್ ನಲ್ಲಿ ಕಳ್ಳತನ ನಡೆದಿತ್ತು. ಈ ಪ್ರಕರಣದಲ್ಲಿ ಆರೋಪಿಗಳು ಎಷ್ಟೊಂದು ಚಾಲಾಕಿತನದಿಂದ ಕಳ್ಳತನ ಮಾಡಿದ್ದರು ಎಂದರೆ ಯಾವುದೇ ಕ್ಲೂ ಬಿಟ್ಟಿರಲಿಲ್ಲ. ಕಳ್ಳರು ಚಾಪೆ ಕೆಳಗೆ ನುಗ್ಗಿದ್ರೆ ಪೊಲೀಸರು ರಂಗೋಲಿ ಕೆಳಗೆ ನುಗ್ತಾರೆ ಎಂಬ ಆಡುಮಾತಿನಂತೆ ಕೊನೆಗೂ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಈ ಕಳ್ಳತನ ಪ್ರಕರಣದ ಮೇನ್ ಕಿಂಗ್ ಪಿನ್ ಇದೇ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಣೆ ಮಾಡುತ್ತಿದ್ದವನು ಎಂಬುದೇ ಶಾಂಕಿಂಗ್ ನ್ಯೂಸ್! ಈ ಪ್ರಕರಣದ ಪ್ರಮುಖ ಆರೋಪಿ ವಿಜಯಕುಮಾರ ಮಿರಿಯಾಲ್ ಮೊದಲು ಇದೇ ಮನಗೂಳಿ ಬ್ಯಾಂಕಿನಲ್ಲಿ ಕೆಲಸ ಮಾಡಿಕೊಂಡಿದ್ದ. ಆ ಸಂದರ್ಭದಲ್ಲಿ ಈತ ಡುಪ್ಲಿಕೇಟ್ ಕೀ ಒಂದನ್ನು ರೆಡಿ ಮಾಡಿಕೊಂಡಿದ್ದ. ಸದ್ಯ ಈತ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೊಣಿಹಾಳದ ಕೆನರಾ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿದ್ದಾನೆ. ಇನ್ನೂ ಎರಡನೇ ಆರೋಪಿ ಚಂದ್ರಶೇಖರ ನೆರೆಲ್ಲ, ಈತ ಕ್ಯಾಸಿನೋ ನಡೆಸುವುದರ ಜೊತೆಗೆ ಕಂಟ್ರ್ಯಾಕ್ಟರ್ ಆಗಿದ್ದಾನೆ.
ಮುಂಚೆ ಈತ ಬ್ಯಾಂಕ್ ನ ಉದ್ಯೋಗಿ ಆಗಿದ್ದ ಸಂದರ್ಭದಲ್ಲಿ ಬ್ಯಾಂಕ್ ನಲ್ಲಿ ಗೋಲ್ ಮಾಲ್ ಮಾಡಿ ಡಿಸ್ ಮಿಸ್ ಆಗಿದ್ದ. ಇನ್ನೂ ಸುನೀಲ್ ಮೋಕಾ, ಈತ ವಿಜಯಕುಮಾರನ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಸದ್ಯ ಇವರ ಬಳಿಯಿಂದ 10 ಕೋಟಿ 75 ಲಕ್ಷ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ ಎರಡು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ, ಖದೀಮರ ಗ್ಯಾಂಗ್ ಹೆಡೆಮುರಿ ಕಟ್ಟಲು ಎಂಟು ತಂಡಗಳನ್ನು ರಚಿಸಿದ್ದ ಎಸ್ಪಿ ಲಕ್ಷ್ಮಣ ನಿಂಬರಗಿ ಅವರ ತಂಡ ಕಳ್ಳರನ್ನು ಖೆಡ್ಡಕ್ಕೆ ಕೆಡವುವಲ್ಲಿ ಯಶಸ್ವಿ ಆಗಿದೆ.
ಅನಾಮತ್ತು 58 ಕೆಜಿ 976 ಗ್ರಾಮ್ ಚಿನ್ನಾಭರಣ ಮತ್ತು 5 ಲಕ್ಷ 30 ಸಾವಿರ ನಗದು ಹಣ ಕದ್ದು ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಿದ್ದ ಕಳ್ಳರ ಜಾಲವನ್ನು ಬೇಧಿಸಿದ ವಿಜಯಪುರ ಪೊಲೀಸರು ಮೊದಲ ಹಂತದಲ್ಲಿ ಮೂವರನ್ನು ಬಂಧಿಸಿ 11 ಕೆಜಿಯಷ್ಟು ಚಿನ್ನ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಅನೇಕರಿದ್ದರು. ಅವರ ಬಳಿ ಇನ್ನುಳಿದ ಚಿನ್ನ, ಹಣವಿದ್ದು ಅವರು ಈಗ ತಲೆ ಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದು ಸ್ಯಾಂಪಲ್ ಅಷ್ಟೇ, ಇನ್ನೂ ಈ ಪ್ರಕರಣದಲ್ಲಿ ಅನೇಕರಿದ್ದು, ಅವರ ಹೆಡೆಮುರಿಯನ್ನು ಆದಷ್ಟು ಬೇಗ ಕಟ್ಟಲಾಗುವುದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮ ಚಿನ್ನ ಮತ್ತು ಹಣ ಖದೀಮರ ಪಾಲಾಯಿತು ಅಂದುಕೊಂಡಿದ್ದ ಗ್ರಾಹಕರ ಮುಖದಲ್ಲಿ ಕೊನೆಗೂ ಸಂತಸದ ನಗು ಮೂಡಿದ್ದು, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
26/06/2025 07:15 pm