", "articleSection": "Crime,News,LadiesCorner", "image": { "@type": "ImageObject", "url": "https://prod.cdn.publicnext.com/s3fs-public/421698-1750936353-Youtube-HD.00_33_53_16.Still2463~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಇಷ್ಟು ದಿನ ಮುಸುಕುಧಾರಿ ಗ್ಯಾಂಗ್, ಜನರಲ್ಲಿ ಇನ್ನಿಲ್ಲದ ಭಯ ಹುಟ್ಟಿಸಿತ್ತು. ಇದೀಗ ಒಂಟಿ ಮಹಿಳ...Read more" } ", "keywords": "Vijayapura house rent theft attempt, thief locked by mother and daughter, theft attempt under pretext of rent, Vijayapura crime news, mother daughter trap thief, thief tried to rob house Vijayapura, Vijayapura brave women, thief locked in house, house rent fraud theft, Vijayapura theft foiled", "url": "https://dashboard.publicnext.com/node" }
ವಿಜಯಪುರ: ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಇಷ್ಟು ದಿನ ಮುಸುಕುಧಾರಿ ಗ್ಯಾಂಗ್, ಜನರಲ್ಲಿ ಇನ್ನಿಲ್ಲದ ಭಯ ಹುಟ್ಟಿಸಿತ್ತು. ಇದೀಗ ಒಂಟಿ ಮಹಿಳೆ ಮಾಲೀಕರನ್ನು ಟಾರ್ಗೆಟ್ ಮಾಡಿದ ಕಳ್ಳನೋರ್ವ ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದು ತಾಯಿ- ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಹೌದು!
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಉಪನ್ಯಾಸಕಿ ಸುಮಂಗಲಾ ಅಂಗಡಿ ಎಂಬುವರ ಮನೆಗೆ ಬಂದಿದ್ದ ಖದೀಮ ಮನೆ ಬಾಡಿಗೆ ಕೇಳಿದ್ದಾನೆ. ಇನ್ನೂ ಸಹಜವಾಗಿ ತಮ್ಮ ಮೊದಲ ಮಹಡಿ ಮನೆಯನ್ನು ಸುಮಂಗಲಾ ಅಂಗಡಿ ಅವರು ತೋರಿಸಿದ್ದಾರೆ. ಈ ವೇಳೆ ಕಳ್ಳ ಬಂಗಾರದ ಒಡವೆಗಳನ್ನು ನೋಡಿ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಆಗ ವಿರೋಧ ಮಾಡಿದ ಸುಮಂಗಲಾ ಅಂಗಡಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಆಗ ಸುಮಂಗಲಾ ಅವರು ಕಿರುಚಿದ್ದಾರೆ. ಕೆಳಮನೆಯಲ್ಲಿದ್ದ ಸುಮಂಗಲಾ ತಾಯಿ ವಿಜಯಲಕ್ಷ್ಮಿ ಮೇಲೆ ಬಂದಿದ್ದಾರೆ. ಆಕೆಗೂ ಹಲ್ಲೆ ಮಾಡಿದ್ದಾನೆ. ಆಗ ಅವರು ಕಿರುಚಾಡಿದ್ದಾರೆ.
ಇಬ್ಬರ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಬಂದಿದ್ದಾರೆ. ಇನ್ನೇನು ಕಳ್ಳ ಎಸ್ಕೇಪ್ ಆಗ್ಬೇಕು ಅನ್ನೋ ಅಷ್ಟರಲ್ಲಿ ಮನೆಯ ಮುಂಭಾಗದ ಗ್ರೀಲ್ ಗೇಟ್ ಮುಚ್ಚಿ ಕೂಡಿ ಹಾಕಿ ತಕ್ಷಣವೇ ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಕಳ್ಳನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆ ಬಾಡಿಗೆ ಕೇಳಿರುವ ಅಸಲಿಯತ್ತನ್ನು ಬಾಯ್ಬಿಟ್ಟಿದ್ದಾನೆ. ಆಂಧ್ರಪ್ರದೇಶ ಮೂಲದವನಾದ ಕಳ್ಳ ಧನಂಜಯ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಸದ್ಯ ಕಳ್ಳನಿಂದ ಹಲ್ಲೆಗೊಳಗಾದ ತಾಯಿ- ಮಗಳು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಹಲ್ಲೆಗೊಳಗಾಗಿಯೂ ಕಳ್ಳನನ್ನು ಕೂಡಿ ಹಾಕಿ ಪೊಲೀಸರಿಗೆ ಒಪ್ಪಿಸಿದ ತಾಯಿ- ಮಗಳ ಸಾಹಸ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ವಿಭಿನ್ನ ರೀತಿಯಲ್ಲಿ ಕಳ್ಳರು ಎಂಟ್ರಿ ಆಗ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ.
-ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ್ ವಿಜಯಪುರ
PublicNext
26/06/2025 04:42 pm