", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1750829817-nag.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArunPrasadMandya" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ: ಜನಸ್ಪಂದನ ಸಭೆಯಲ್ಲಿ ಕೃಷಿ ಸಚಿವರಿಗೆ ಕಾಂಗ್ರೆಸ್ ಕಾರ್ಯಕರ್ತನೇ ತರಾಟೆ ತೆಗೆದುಕೊಂಡ ಪ್ರಸಂಗ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ. ...Read more" } ", "keywords": "Mandya, agriculture minister, Cheluvarayaswamy, Congress worker criticism, politician controversy.", "url": "https://dashboard.publicnext.com/node" }
ಮಂಡ್ಯ: ಜನಸ್ಪಂದನ ಸಭೆಯಲ್ಲಿ ಕೃಷಿ ಸಚಿವರಿಗೆ ಕಾಂಗ್ರೆಸ್ ಕಾರ್ಯಕರ್ತನೇ ತರಾಟೆ ತೆಗೆದುಕೊಂಡ ಪ್ರಸಂಗ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಪಟ್ಟಣದಲ್ಲಿ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಜನಸ್ಪಂದನ ಸಭೆಯಲ್ಲಿ ಘಟನೆ ನಡೆದಿದ್ದು ತಮ್ಮೂರಿನ ಸಮಸ್ಯೆ ಸರಿಪಡಿಸದಿದ್ದಕ್ಕೆ ಸಿಡಿದೆದ್ದ ವಳಗೆರೆ ಮೆಣಸ ಗ್ರಾಮದ ಕೈ ಕಾರ್ಯಕರ್ತ ನಾಗೇಂದ್ರ ಸಭೆಯಲ್ಲಿ ಸಚಿವರಿಗೆ ಸಾರ್ವಜನಿಕವಾಗಿ ತರಾಟೆ ತೆಗೆದುಕೊಂಡ್ರು.
ನಾಗೇಂದ್ರ ಅವರ ವರ್ತನೆಗೆ ಕೆಲಕಾಲ ಸಚಿವ ಚೆಲುವರಾಯಸ್ವಾಮಿ ಕಕ್ಕಾಬಿಕ್ಕಿಯಾದ್ರು. ತಮ್ಮೂರಿನ ಕೆರೆಯ ಚೆಕ್ ಡ್ಯಾಮ್ ಮತ್ತು ಏರಿ ಸರಿಪಡಿಸಿ ಅಂತ ಆಕ್ರೋಶ ಭರಿತ ಮಾತುಗಳನ್ನಾಡುತ್ತಿದ್ದ ಕಾರ್ಯಕರ್ತರನ್ನು ಸಮಾಧಾನಪಡಿಸಲು ಅಧಿಕಾರಿಗಳು ಮುಂದದ್ರೂ ಪ್ರಯೋಜನವಾಗಲಿಲ್ಲ. ಕೈ ಕಾರ್ಯಕರ್ತ ನಾಗೇಂದ್ರ ಅವರ ಮಾತು ಸತ್ಯ ಎಂದು ಜೆಡಿಎಸ್ ಶಾಸಕ ಮಂಜು ಸಚಿವರಿಗೆ ಅಲ್ಲಿನ ಸಮಸ್ಯೆ ವಿವರಿಸಲು ಮುಂದಾದರು.
ಕಡೆಗೆ ಆಕ್ರೋಶದಿಂದ ಮಾತನಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತ ನಾಗೇಂದ್ರ ಅವರನ್ನ ಅಧಿಕಾರಿಗಳು ಮತ್ತು ಪಕ್ಷದ ಮುಖಂಡರು ಸಮಾಧಾನ ಪಡಿಸಿ ಸಭೆಯಿಂದ ಹೊರ ಕರೆದೊಯ್ದರು.
PublicNext
25/06/2025 11:07 am