ನಂಜನಗೂಡು : ಸಾರಿಗೆ ಬಸ್ ಟೈಯರ್ ಸ್ಫೋಟಗೊಂಡ ಪರಿಣಾಮ ಸರ್ಕಾರಿ ಬಸ್ ನಲ್ಲಿದ್ದ 10 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ನಂಜನಗೂಡು ತಾಲ್ಲೂಕು ಹೆಡಿಯಾಲ ಸಮೀಪ ನಡೆದಿದೆ.
ಸ್ಫೋಟದ, ರಭಸಕ್ಕೆ ಚಕ್ರದ ಬಳಿ ಇರುವ ಪ್ರಯಾಣಿಕರು ಕುಳಿತುಕೊಳ್ಳುವ ಒಳಭಾಗ ಛಿದ್ರವಾಗಿದೆ. ಶಾಯಿದಾಬಾನು ಎಂಬ ಮಹಿಳೆಗೆ ಗಂಭೀರ ಗಾಯವಾಗಿದೆ. ಬೆಂಗಳೂರಿನಿಂದ ಹೆಚ್.ಡಿ.ಕೋಟೆಯತ್ತ ಸಾಗುತ್ತಿದ್ದ ಬಸ್ ಹೆಡಿಯಾಲ ಬಳಿ ಟೈರ್ ಸ್ಫೋಟಗೊಂಡಿದೆ.
ಮಾಹಿತಿ ಅರಿತ ಹೆಡಿಯಾಲ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ನೇಮತ್ ಉಲ್ಲಾಖಾನ್ ಮತ್ತು ಸ್ನೇಹಿತರು ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ ನೊಂದಣಿ ಸಂಖ್ಯೆ KA10 F0272 ಸ್ಥಳೀಯರು ಆನ್ ಲೈನ್ ನಲ್ಲಿ ಈ ನೋಂದಣಿ ಸಂಖ್ಯೆ ಪರಿಶೀಲಿಸಿದಾಗ ಅಚ್ಚರಿ ಮಾಹಿತಿ ಬಯಲಾಗಿದೆ. 2019 ರಿಂದ ಬಸ್ ಇನ್ಶೂರೆನ್ಸ್ ರಿನ್ಯೂ ಆಗಿಲ್ಲವೆಂದು ತಿಳಿದುಬಂದಿದೆ. ಸರ್ಕಾರಿ ವಾಹನಗಳೇ ನಿಯಮಗಳನ್ನ ಉಲ್ಲಂಘಿಸಿರುವುದು ನಿಜವಾಗಲೂ ನಾಚಿಕೆಗೇಡಿನ ಸಂಗತಿಯಾಗಿದೆ.
PublicNext
30/06/2025 08:12 pm