", "articleSection": "Politics,Government,Agriculture", "image": { "@type": "ImageObject", "url": "https://prod.cdn.publicnext.com/s3fs-public/387839-1752663206-WhatsApp-Image-2025-07-16-at-4.16.16-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ: ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ (PMDKY)ಗೆ ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಕೇಂದ್ರ ರೈಲ್...Read more" } ", "keywords": "PM Dhan-Dhaanya Krishi Yojana, cabinet approval, farmer benefits, agricultural productivity, crop diversification, irrigation infrastructure, credit facilities, rural development. ", "url": "https://dashboard.publicnext.com/node" } ಪಿಎಂ "ಧನ್-ಧಾನ್ಯ' ಕೃಷಿ ಯೋಜನೆಗೆ ಸಚಿವ ಸಂಪುಟದ ಅನುಮೋದನೆ - 1.75 ಕೋಟಿ ರೈತರಿಗೆ ಲಾಭ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಎಂ "ಧನ್-ಧಾನ್ಯ' ಕೃಷಿ ಯೋಜನೆಗೆ ಸಚಿವ ಸಂಪುಟದ ಅನುಮೋದನೆ - 1.75 ಕೋಟಿ ರೈತರಿಗೆ ಲಾಭ!

ನವದೆಹಲಿ: ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ (PMDKY)ಗೆ ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಕೇಂದ್ರ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ಈ ಯೋಜನೆ ಭಾರತ ಸರ್ಕಾರದ ಪ್ರಮುಖ ಕೃಷಿ ಪ್ರಾಯೋಜಿತ ಯೋಜನೆಗಳಲ್ಲಿ ಒಂದಾಗಿದ್ದು, ಅದರ ಲಾಭವು ದೇಶದ 1.75 ಕೋಟಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ನೇರವಾಗಿ ಲಭಿಸಲಿದೆ.

ಈ ಯೋಜನೆ ವಿಶೇಷವಾಗಿ ಕೃಷಿ ಉತ್ಪಾದನೆ ಕಡಿಮೆ ಇರುವ ಜಿಲ್ಲೆಗಳಲ್ಲಿ ಕೃಷಿ ಆಧಾರಿತ ಮೂಲಸೌಕರ್ಯಗಳನ್ನು ಬಲಪಡಿಸಲು, ರೈತರ ಆದಾಯ ಹೆಚ್ಚಿಸಲು ಮತ್ತು ಕೃಷಿಯ ಆಧುನೀಕರಣಕ್ಕೆ ನೆರವಾಗಲಿದ್ದು, ಬೆಳೆ ವೈವಿಧ್ಯೀಕರಣ, ಹವಾಮಾನ ಸೌಹಾರ್ದ ಕೃಷಿ ಪದ್ಧತಿ, ನೀರಾವರಿ, ಹಾಗೂ ಸಾಲ ಸೌಲಭ್ಯ ಮತ್ತಷ್ಟು ಸುಧಾರಣೆಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಯೋಜನೆಯ ಘೋಷಣೆ ಮಾಡಿದ್ದರು.

ಯೋಜನೆಯ ಮುಖ್ಯ ಉದ್ದೇಶಗಳು:

* ಹೊಸ ಕೃಷಿ ತಂತ್ರಜ್ಞಾನ ಅಳವಡಿಸುವುದು,

* ಒಂದೇ ಬೆಳೆ ಬದಲು ಮಿಶ್ರ ಬೇಸಾಯ ಪ್ರೋತ್ಸಾಹಿಸುವುದು,

* ಹವಾಮಾನ ಮತ್ತು ಭೂ ಪ್ರಕಾರದ ಪ್ರಕಾರ ಸಮಂಜಸ ಬೆಳೆ ಆಯ್ಕೆ,

* ಗ್ರಾಮ ಮಟ್ಟದ ನೀರಾವರಿ ವ್ಯವಸ್ಥೆ ಬಲಪಡಿಸುವುದು, ಹಾಗೂ ಕೃಷಿಕರಿಗೆ ಸಾಲ ಲಭ್ಯತೆಯನ್ನು ಸುಧಾರಿಸುವುದಾಗಿದೆ.

Edited By : Abhishek Kamoji
PublicNext

PublicNext

16/07/2025 04:23 pm

Cinque Terre

33.28 K

Cinque Terre

1

ಸಂಬಂಧಿತ ಸುದ್ದಿ