ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಹಾರ ಸರ್ಕಾರದಿಂದ ಬಂಪರ್ ಕೊಡುಗೆ : ಬಿಸಿಯೂಟ ತಯಾರಕರಿಗೆ ತಿಂಗಳಿಗೆ ₹3,300, ದೈಹಿಕ ಶಿಕ್ಷಕರಿಗೆ ₹16,000 ಗೌರವಧನ!

ಪಾಟ್ನಾ: ವಿದ್ಯುತ್‌ ಸೇರಿದಂತೆ ಹಲವು ಉಚಿತ ಭರವಸೆ ನೀಡಿರುವ ಬಿಹಾರದ ಸಿಎಂ ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರ ಚುನಾವಣೆಗೆ ಮುನ್ನ ಮತ್ತೊಂದು ಬಂಪರ್‌ ಕೊಡುಗೆ ಘೋಷಣೆ ಮಾಡಿದೆ. ಬಿಸಿಯೂಟ ತಯಾರಕರು, ರಾತ್ರಿ ಕಾವಲುಗಾರರು ಹಾಗೂ ಗೌರವ ಧನವನ್ನ ಹೆಚ್ಚಳ ಮಾಡಿದೆ. ಈ ಕುರಿತು ತಮ್ಮ ಎಕ್ಸ್‌ ಮೂಲಕ ಹಂಚಿಕೊಂಡಿದ್ದಾರೆ.

ನಿತೀಶ್ ಕುಮಾರ್ ಹೇಳಿದ್ದೇನು..?

"2005ರಲ್ಲಿ ನಮ್ಮ ಸರ್ಕಾರ ಬಂದಾಗ ಶಿಕ್ಷಣಕ್ಕೆ ಮೀಸಲಾದ ಬಜೆಟ್ ₹4,366 ಕೋಟಿ ರೂಪಾಯಿಗಳಿತ್ತು. ಈಗ ಅದು ₹77,690 ಕೋಟಿ ರೂಪಾಯಿಗಳಾಗಿದ್ದು, ಶಿಕ್ಷಕರ ನೇಮಕಾತಿ, ಶಾಲಾ ಕಟ್ಟಡ ನಿರ್ಮಾಣ ಮತ್ತು ಮೂಲಸೌಕರ್ಯಗಳ ಬೆಳವಣಿಗೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಅಡುಗೆ ಸಿಬ್ಬಂದಿ, ಕಾವಲುಗಾರರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಶಿಕ್ಷಣ ವ್ಯವಸ್ಥೆ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರ ಗೌರವಧನವನ್ನು ದ್ವಿಗುಣಗೊಳಿಸಿ, ಅವರಿಗೆ ಗೌರವವನ್ನೂ ಜತೆಗೆ ಪ್ರೋತ್ಸಾಹವನ್ನೂ ನೀಡಲಾಗಿದೆ ಎಂದು ನಿತೀಶ್ ತಿಳಿಸಿದ್ದಾರೆ.

ಗೌರವಧನದ ವಿವರ:

ಬಿಸಿಯೂಟ ತಯಾರಕರು: ₹1,650 → ₹3,300

ರಾತ್ರಿ ಕಾವಲುಗಾರರು (ಮಾಧ್ಯಮಿಕ/ಉನ್ನತ ಶಾಲೆಗಳು): ₹5,000 → ₹10,000

ದೈಹಿಕ ಶಿಕ್ಷಣ ಮತ್ತು ಆರೋಗ್ಯ ಬೋಧಕರು: ₹8,000 → ₹16,000

ವಾರ್ಷಿಕ ವೇತನ ಹೆಚ್ಚಳ: ₹200 → ₹400

ಈ ಕ್ರಮದಿಂದ ಕಾರ್ಯನಿರತ ಸಿಬ್ಬಂದಿಗೆ ಆರ್ಥಿಕ ಬಲ ದೊರೆಯುವುದು ಜೊತೆಗೆ ಕಾರ್ಯೋತ್ಸಾಹವೂ ಹೆಚ್ಚಲಿದೆ ಎಂದು ನಿತೀಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Edited By : Abhishek Kamoji
PublicNext

PublicNext

01/08/2025 11:28 am

Cinque Terre

16.39 K

Cinque Terre

0