ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ತೋಟದ ಮನೆಗೆ ನುಗ್ಗಿ ನಾಯಿ ಎಳೆದೊಯ್ದ ಚಿರತೆ!- ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಮೈಸೂರು: ತೋಟದ ಮನೆಗೆ ನುಗ್ಗಿದ ಚಿರತೆಯೊಂದು ನಾಯಿಯನ್ನು ಎಳೆದೊಯ್ದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಉಂಡುವಾಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಪ್ರತಾಪ್ ಎಂಬುವರ ತೋಟದ ಮನೆಯಲ್ಲಿ ನಾಯಿ ಮರಿಯನ್ನು ಚಿರತೆ ಎಳೆದುಕೊಂಡು ಹೋದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಚಿರತೆಯ ಸೆರೆಗೆ ಸ್ಥಳದಲ್ಲಿ ಬೋನು ಇರಿಸಲಾಗಿದೆ.

Edited By : Vinayak Patil
PublicNext

PublicNext

19/01/2026 06:15 pm

Cinque Terre

16.29 K

Cinque Terre

0

ಸಂಬಂಧಿತ ಸುದ್ದಿ