ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆಗೆ ಬರುವ ಗಣತಿದಾರರ ಅಧಿಕೃತ ಗುರುತಿನ ಚೀಟಿಯನ್ನು ಪರಿಶೀಲಿಸಿ, ನಿಖರ ಮಾಹಿತಿ ನೀಡಿ - ರಾಘವೇಂದ್ರ ರಾವ್

ಶಿರಹಟ್ಟಿ: ಸುಮಾರು 15 ವರ್ಷಗಳ ಬಳಿಕ ದೇಶದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಯನ್ನು ನಿರ್ಧರಿಸುವ ಬೃಹತ್ ಜನಗಣತಿ ಪ್ರಕ್ರಿಯೆ ಆರಂಭವಾಗಿದ್ದು, ಅದಕ್ಕೆ ತಕ್ಕಂತೆ ತಾಲೂಕಿನಾದ್ಯಂತ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಕೆ. ರಾಘವೇಂದ್ರ ರಾವ್ ಅವರು ತಿಳಿಸಿದರು.

ಅವರು ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಮಟ್ಟದ ಗಣತಿಯ ನೀಲನಕ್ಷೆಯನ್ನು ಬಿಡುಗಡೆ ಮಾಡಿದರು. ಈ ಬಾರಿ ಗಣತಿಯು ಸಂಪೂರ್ಣ ಡಿಜಿಟಲ್ ಆಗಿದ್ದು, ತಾಲೂಕಿನ ಪ್ರತಿಯೊಂದು ಮನೆ ಹಾಗೂ ವ್ಯಕ್ತಿಯ ವಿವರ ದಾಖಲಿಸಲು ವಿಶೇಷ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು. ಗಣತಿಯಲ್ಲಿ ಗ್ರಾಮೀಣ ಹಾಗೂ ಪಟ್ಟಣ ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಹೇಳಿದರು.

ಶಿರಹಟ್ಟಿ ಗ್ರಾಮೀಣ ಭಾಗದ ವಿವರ:

ಗ್ರಾಮೀಣ ಭಾಗದ ಜನಗಣತಿ ಕಾರ್ಯದ ಉಸ್ತುವಾರಿಯನ್ನು ಸ್ವತಃ ತಹಶೀಲ್ದಾರರೇ 'ಚಾರ್ಜ್ ಆಫೀಸರ್' ಆಗಿ ನಿರ್ವಹಿಸುತ್ತಿದ್ದಾರೆ.ಬ್ಲಾಕ್‌ಗಳ ರಚನೆಯಲ್ಲಿ ಗ್ರಾಮೀಣ ಭಾಗದಲ್ಲಿ ಒಟ್ಟು 127 ಬ್ಲಾಕ್‌ಗಳೆಂದು ಗುರುತಿಸಲಾಗಿದೆ. ಸಿಬ್ಬಂದಿ ನಿಯೋಜನೆ: ಒಟ್ಟು 171 ಗಣತಿದಾರರನ್ನು ನೇಮಕ ಮಾಡಲಾಗಿದ್ದು, ಪ್ರತಿ ಗಣತಿದಾರರಿಗೆ ಸರಾಸರಿ 150 ರಿಂದ 200 ಮನೆಗಳ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು.

ಮೇಲ್ವಿಚಾರಣೆ: ಗಣತಿದಾರರ ಕಾರ್ಯವನ್ನು ಗಮನಿಸಲು 21 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪ್ರತಿ 6 ಗಣತಿದಾರರಿಗೆ ಒಬ್ಬರಂತೆ ಮೇಲ್ವಿಚಾರಕರು ಇರಲಿದ್ದು, ಇವರ ಮೇಲೆ ಮತ್ತೆ 4 ಹಿರಿಯ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ ಎಂದು ವಿವರವಾಗಿ ಹೇಳಿದರು.

ಶಿರಹಟ್ಟಿ ಪಟ್ಟಣ ಪ್ರದೇಶದ ವಿವರ:

ಪಟ್ಟಣ ಪ್ರದೇಶದ ಗಣತಿ ಪ್ರಕ್ರಿಯೆಯು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ನಡೆಯಲಿದೆ.

ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು 32 ಬ್ಲಾಕ್‌ಗಳನ್ನುರಚನೆ ಮಾಡಲಾಗಿದೆ ಎಂದು ಹೇಳಿದರು.

ಸಿಬ್ಬಂದಿ : ಪಟ್ಟಣದ ಎಣಿಕೆಗಾಗಿ 32 ಗಣತಿದಾರರನ್ನು ನಿಯೋಜಿಸಲಾಗಿದ್ದು, ಇವರ ಕಾರ್ಯವೈಖರಿಯನ್ನು ಪರೀಕ್ಷಿಸಲು 10 ಅಧಿಕಾರಿಗಳ ತಂಡ ಮೇಲ್ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದರು.

ಈ ಮಹತ್ಕಾರ್ಯದಲ್ಲಿ ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಕಂದಾಯ ಇಲಾಖೆಯ ನೌಕರರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಸಾರ್ವಜನಿಕರು ಮನೆಗೆ ಬರುವ ಗಣತಿದಾರರಿಗೆ ಅಧಿಕೃತ ಗುರುತಿನ ಚೀಟಿ ಪರಿಶೀಲಿಸಿ, ನಿಖರ ಮಾಹಿತಿ ನೀಡಬೇಕು. ನೀವು ನೀಡುವ ಮಾಹಿತಿ ಗೌಪ್ಯವಾಗಿರಲಿದ್ದು, ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಕೆ. ರಾಘವೇಂದ್ರ ರಾವ್ ಮನವಿ ಮಾಡಿದರು.

Edited By : PublicNext Desk
Kshetra Samachara

Kshetra Samachara

04/04/2026 05:51 pm

Cinque Terre

1.5 K

Cinque Terre

0

ಸಂಬಂಧಿತ ಸುದ್ದಿ