ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯಿಂದ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಆಮೆವೇಗದಲ್ಲೇ ಸಾಗುತ್ತಿದೆ. ಇದಕ್ಕೆ ಕುಮಟಾ ತಾಲೂಕಿನ ಹೊನ್ಮಾವು ಬಳಿ ಸೇತುವೆ ಕಾಮಗಾರಿ ಅರ್ಧದಲ್ಲೇ ಬಿಟ್ಟು ನಾಲ್ಕು ತಿಂಗಳು ಕಳೆದಿದೆ ಈ ಬಗ್ಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಕುಮಟಾ ತಾಲೂಕಿನ ಹೊನ್ಮಾವು ಬಳಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಇಲ್ಲಿ ಒಂದು ಸೇತುವೆ ನಿರ್ಮಾಣ ಬಾಕಿ ಇದೆ. ಸೇತುವೆ ನಿರ್ಮಾಣಕ್ಕೆ ಕೈ ಹಾಕಿದ ಗುತ್ತಿಗೆ ಕಂಪನಿ ಅರೆಬರೆ ಕೆಲಸ ಮಾಡಿ ಬಿಟ್ಟು ಈಗ ನಾಲ್ಕು ತಿಂಗಳು ಕಳೆದಿದೆ ಇದರಿಂದ ಇಲ್ಲಿನ ಸಂಚರಿಸುವ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ.
PublicNext
28/04/2026 01:42 pm
LOADING...