ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಲ್ಮಾನ್ ಖಾನ್ ನಮ್ಮನ್ನು ಬೆದರಿಸುತ್ತಿದ್ದಾರೆ ಲೀಗಲ್ ನೋಟಿಸ್ ಬೆನ್ನಲ್ಲೇ ಆಕ್ರೋಶ ಹೊರಹಾಕಿದ ನಿರ್ಮಾಪಕ ಅಮಿತ್ ಜಾನಿ!

ಬೆಂಗಳೂರು : ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ಮುಂಬರುವ 'ಕಾಲಾ ಹಿರನ್: ದಿ ಬ್ಯಾಟಲ್ ಫಾರ್ ಲೆಗಸಿ' ಚಿತ್ರದ ನಿರ್ಮಾಪಕರ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಈ ಚಿತ್ರವು ಸಲ್ಮಾನ್ ಖಾನ್ ಅವರ 1998ರ ಕೃಷ್ಣಮೃಗ ಬೇಟೆ ಪ್ರಕರಣದಿಂದ ಪ್ರೇರಿತವಾಗಿದೆ ಎಂಬ ಅಂಶ ಬೆಳಕಿಗೆ ಬಂದ ನಂತರ ನಟ ತೀವ್ರ ಆಘಾತ ಮತ್ತು ನಿರಾಶೆ ವ್ಯಕ್ತಪಡಿಸಿದ್ದು, ಸಿನಿಮಾ ಬಿಡುಗಡೆಗೆ ತಡೆ ಕೋರಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಚಿತ್ರದ ಎಲ್ಲಾ ಪೋಸ್ಟರ್‌ಗಳು, ಪ್ರಚಾರ ಸಾಧನಗಳು ಹಾಗೂ ಹೆಸರನ್ನು ತಕ್ಷಣವೇ ಸಾರ್ವಜನಿಕ ವಲಯದಿಂದ ತೆಗೆದುಹಾಕಬೇಕೆಂದು ಅವರು ಒತ್ತಾಯಿಸಿದ್ದು, ಒಂದು ವೇಳೆ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಚಿತ್ರತಂಡದ ವಿರುದ್ಧ ಮತ್ತಷ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಲ್ಮಾನ್ ಖಾನ್ ಕಳುಹಿಸಿರುವ ಈ ಕಾನೂನು ನೋಟಿಸ್‌ಗೆ ಚಿತ್ರದ ನಿರ್ಮಾಪಕ ಅಮಿತ್ ಜಾನಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಟನ ಈ ಕ್ರಮವನ್ನು ಕೇವಲ ಬೆದರಿಸುವ ತಂತ್ರ ಎಂದು ಕರೆದಿದ್ದಾರೆ. ಸಲ್ಮಾನ್ ಖಾನ್ ಕಾನೂನು ನೋಟಿಸ್ ಕಳುಹಿಸುವ ಮೂಲಕ ಜನರನ್ನು ಹೆದರಿಸಲು ಪ್ರಾರಂಭಿಸಿದ್ದಾರೆ ಮತ್ತು ಇಡೀ ಚಿತ್ರತಂಡ ತಮ್ಮ ಮುಂದೆ ತಲೆಬಾಗಬೇಕು ಎಂದು ಅಂದುಕೊಂಡಿದ್ದಾರೆ ಎಂದು ಅಮಿತ್ ಜಾನಿ ಗಂಭೀರ ಆರೋಪ ಮಾಡಿದ್ದಾರೆ. ಕೃಷ್ಣಮೃಗ ಬೇಟೆ ಪ್ರಕರಣದ ನೆರಳು ಸಲ್ಮಾನ್ ಖಾನ್ ಅವರನ್ನು ಇಂದಿಗೂ ಕಾಡುತ್ತಿದ್ದು, ಈಗ ಸಿನಿಮಾವೊಂದರ ಶೀರ್ಷಿಕೆ ಮತ್ತು ಕಥಾವಸ್ತು ಈ ಮಟ್ಟಿಗೆ ದೊಡ್ಡ ಕಾನೂನು ಹೋರಾಟಕ್ಕೆ ಕಾರಣವಾಗಿರುವುದು ಇಡೀ ಬಾಲಿವುಡ್ ವಲಯದಲ್ಲಿ ಭಾರೀ ಸಂಚಲನ ಮತ್ತು ತೀವ್ರ ಚರ್ಚೆಯನ್ನು ಮೂಡಿಸಿದೆ.

Edited By : Nirmala Aralikatti
PublicNext

PublicNext

03/06/2026 02:41 pm

Cinque Terre

8.98 K

Cinque Terre

0

ಸಂಬಂಧಿತ ಸುದ್ದಿ