ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಯಕ್ಷಗಾನ ಕಲಾವಿದನಲ್ಲಿ ಮಾತಿನ ಕೌಶಲ್ಯವೂ ಹೆಚ್ಚಿದಾಗ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ- ಶ್ರೀಹರಿ ಅಸ್ರಣ್ಣ

ಕಟೀಲು : ಯಕ್ಷಗಾನ ಕಲಾವಿದನಲ್ಲಿ ಮಾತಿನ ಕೌಶಲ್ಯವೂ ಹೆಚ್ಚಿದಾಗ ಆತನ ಪಾತ್ರವೂ ಗೆಲ್ಲುತ್ತದೆ. ಪ್ರೇಕ್ಷಕರಿಗೂ ಇಷ್ಟವಾಗುತ್ತದೆ. ಹಾಗಾಗಿ ಕಟೀಲು ಮೇಳದ ಕಲಾವಿದರು ತಾಳಮದ್ದಳೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಲು ಕಟೀಲು ದೇಗುಲದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣ ಹೇಳಿದರು.

ಅವರು ಕಟೀಲು ದೇಗುಲದಲ್ಲಿ ಕಟೀಲು ಯಕ್ಷಗಾನ ಮೇಳಗಳ ಆಸಕ್ತ ಕಲಾವಿದರಿಂದ ನಡೆಯುವ ತಾಳಮದ್ದಲೆ ಸಪ್ತಾಹದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಟೀಲು ದೇಗುಲದ ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ ಉದ್ಘಾಟಿಸಿದರು.

ಇದೇ ಸಂದರ್ಭ ಕಟೀಲು ಮೇಳದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಬಾಯಾರು ರಘು ಶೆಟ್ಟಿ, ಕೈರಂಗಳ ಕೃಷ್ಣ ಮೂಲ್ಯ, ಲಕ್ಷ್ಮಣ ಕೋಟ್ಯಾನ್ ಇವರನ್ನು ರೂಪಾಯಿ ಒಂದು ಲಕ್ಷ ನಗದಿನೊಂದಿಗೆ ಗೌರವಿಸಲಾಯಿತು.

ಕಟೀಲು ಮೇಳಗಳ ಸಂಚಾಲಕರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಅರ್ಚಕರಾದ ಕಮಲಾದೇವಿ ಪ್ರಸಾದ ಅಸ್ರಣ್ಣ ಮತ್ತಿತರರಿದ್ದರು. ಡಾ. ಶ್ರುತಕೀರ್ತಿರಾಜ ನಿರೂಪಿಸಿದರು. ಬಳಿಕ ಕಟೀಲು ಮೇಳದ ಕಲಾವಿದರಿಂದ ಸುಧನ್ವ ತಾಳಮದ್ದಲೆ ನಡೆಯಿತು. ಇಂದು ವಾಲಿ ಪ್ರಸಂಗ ಪ್ರದರ್ಶಿತವಾಗಲಿದೆ.

Edited By : PublicNext Desk
Kshetra Samachara

Kshetra Samachara

09/06/2026 08:56 am

Cinque Terre

420

Cinque Terre

0