ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಡಿ.ಕೆ. ಶಿವಕುಮಾರ್‌ಗೆ ದಲೈ ಲಾಮಾ ಅವರಿಂದ ವಿಶೇಷ ಸಂದೇಶ - ಬುದ್ಧನ ಮೂರ್ತಿ ನೀಡಿ ಗೌರವಿಸಿದ ಟಿಬೆಟ್ ನಿಯೋಗ!

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರಿಗೆ ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಹಾಗೂ ಟಿಬೆಟ್ ಸರ್ಕಾರದ (CTA) ಸಿಕ್ಯಾಂಗ್ ಪೆನ್ಪಾ ತ್ಸೆರಿಂಗ್ ಅವರು ವಿಶೇಷ ಅಭಿನಂದನಾ ಪತ್ರಗಳನ್ನು ರವಾನಿಸಿದ್ದಾರೆ.

ಕೇಂದ್ರ ಟಿಬೆಟಿಯನ್ ಆಡಳಿತದ ಮುಖ್ಯ ಪ್ರತಿನಿಧಿ ಜಿಗ್ಮೆ ಸಲ್ಟ್ರಿಮ್ ಅವರು ಇಂದು ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿ ಈ ಅಭಿನಂದನಾ ಪತ್ರಗಳನ್ನು ಹಸ್ತಾಂತರಿಸಿದರು.

ಬುದ್ಧನ ಪ್ರತಿಮೆ, ಐತಿಹಾಸಿಕ ಚಿತ್ರದ ಉಡುಗೊರೆ

ಈ ಸೌಹಾರ್ದಯುತ ಭೇಟಿಯ ಸಂದರ್ಭದಲ್ಲಿ ಜಿಗ್ಮೆ ಸಲ್ಟ್ರಿಮ್ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪವಿತ್ರವಾದ ಬುದ್ಧನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದರು. ಇದರೊಂದಿಗೆ, ಕರ್ನಾಟಕ ಮತ್ತು ಟಿಬೆಟ್ ನಡುವಿನ ಐತಿಹಾಸಿಕ ಬಾಂಧವ್ಯವನ್ನು ನೆನಪಿಸುವ ಅಪರೂಪದ ಚೌಕಟ್ಟಿನ ಹಳೆಯ ಛಾಯಾಚಿತ್ರವೊಂದನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಯಿತು. ಈ ಭೇಟಿಯ ಸುಂದರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಕರ್ನಾಟಕ ರಾಜ್ಯ ಮತ್ತು ದೇಶಭ್ರಷ್ಟ ಟಿಬೆಟಿಯನ್ ಸಮುದಾಯದ ನಡುವೆ ದಶಕಗಳ ಸುದೀರ್ಘ ಹಾಗೂ ಐತಿಹಾಸಿಕ ಸಂಬಂಧವಿದೆ ಎಂಬುದನ್ನು ಈ ಭೇಟಿಯ ವೇಳೆ ಉಲ್ಲೇಖಿಸಲಾಯಿತು:

1960ರ ದಶಕದಲ್ಲಿ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಚೀನಾದ ಆಕ್ರಮಣಕ್ಕೆ ಹೆದರಿ ಬಂದಿದ್ದ ಟಿಬೆಟಿಯನ್ನರಿಗೆ ಮೈಸೂರಿನ ಬೈಲಕುಪ್ಪೆಯಲ್ಲಿ ಪುನರ್ವಸತಿ ಕಲ್ಪಿಸಿದ್ದರು. ಅಂದು ಕರ್ನಾಟಕ ಸರ್ಕಾರ ತೋರಿದ ಮಾನವೀಯತೆ ಮತ್ತು ಕರುಣೆಯನ್ನು ಟಿಬೆಟ್ ನಿಯೋಗ ಇಂದಿಗೂ ಸದಾ ಸ್ಮರಿಸುತ್ತದೆ ಎಂದು ಜಿಗ್ಮೆ ಸಲ್ಟ್ರಿಮ್ ಅವರು ಕೃತಜ್ಞತೆ ಸಲ್ಲಿಸಿದರು.

"ಕರ್ನಾಟಕವು ಭಾರತದಲ್ಲೇ ಅತಿ ಹೆಚ್ಚು ಟಿಬೆಟಿಯನ್ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವಾಗಿದೆ. ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯವು ಮತ್ತಷ್ಟು ಪ್ರಗತಿ ಹೊಂದಲಿ ಮತ್ತು ಟಿಬೆಟಿಯನ್ ಸಮುದಾಯದೊಂದಿಗಿನ ಬಾಂಧವ್ಯ ಹೀಗೆಯೇ ಮುಂದುವರಿಯಲಿ" ಎಂದು ದಲೈ ಲಾಮಾ ತಮ್ಮ ಪತ್ರದಲ್ಲಿ ಹಾರೈಸಿದ್ದಾರೆ.

Edited By : Nagaraj Tulugeri
PublicNext

PublicNext

14/06/2026 07:58 pm

Cinque Terre

78.69 K

Cinque Terre

0