ಹುಬ್ಬಳ್ಳಿ: ಇಂದು ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ, ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಸಂಯುಕ್ತ ಆಶ್ರಯದಲ್ಲಿ, ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಜಾಗೃತಿಗಾಗಿ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ.ಪೂ ಶ್ರೀ ಶ್ರೀ ಸಿದ್ಧ ಶಿವಯೋಗಿಗಳು ಸ್ವಾಮೀಜಿ ಮತ್ತು ಸ್ವರ್ಣ ಗ್ರೂಪ್ ಆಫ್ ಕಂಪನಿ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ವಿಎಸ್ವಿ ಪ್ರಸಾದ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ರಕ್ತದಾನದಿಂದ ಅನೇಕ ಜೀವಗಳನ್ನು ಉಳಿಸಬಹುದು, ಈ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಇಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಕ್ತದಾನದ ಜಾಗೃತಿಗಾಗಿ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಿಜಲಿಂಗಪ್ಪ ರಸ್ತೆಯಿಂದ ಕೋರ್ಟ್ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತದಿಂದ ದಾಜಿಬಾನ್ಪೇಟ್, ಎಸ್.ಟಿ ಭಂಡಾರಿ ರೋಡ್ ಮೂರು ಸಾವಿರಮಠದಿಂದ ಮರಳಿ ನಿಜಲಿಂಗಪ್ಪ ರಸ್ತೆಗೆ ಬರುವ ಮೂಲಕ ರಕ್ತದಾನದ ನಡಿಗೆ ಮಾಡಿದರು. ಹಲವಾರು ಗಣ್ಯರು, ಹುಬ್ಬಳ್ಳಿಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇನ್ನು ರಕ್ತದಾನ ಮಾಡಿ – ಜೀವ ಉಳಿಸಿ" ಎಂಬ ಧ್ಯೇಯದೊಂದಿಗೆ ಆಯೋಜಿಸಿರುವ ಈ ಶಿಬಿರದಲ್ಲಿ ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ರಕ್ತದಾನ ಮಾಡಿದರು. "ರಕ್ತಕ್ಕೆ ಯಾವುದೇ ಕೃತಕ ಪರ್ಯಾಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ರಕ್ತದಾನ ಮಾಡಬೇಕೆಂದು ಗಣ್ಯರು ಮನವಿ ಮಾಡಿಕೊಂಡರು.
Kshetra Samachara
15/06/2026 12:13 pm
LOADING...