ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಕಳ್ಳರ ಕರಾಮತ್ತು ಭೇದಿಸಿದ ಖಾಕಿ: ಕಳುವಾಗಿದ್ದ 15 ಬೈಕ್‌ಗಳು ಪತ್ತೆ, ಮಾಲೀಕರಿಗೆ ಸಂತಸ!

ರಾಯಚೂರು: ರಾಯಚೂರಿನ ನೇತಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಂಬೇಡ್ಕರ್ ವೃತ್ತದ ಬಳಿ ನಿಲ್ಲಿಸಿದ್ದ ನಾರಾಯಣ ರಾಥೋಡ್ ಅವರ ಬಜಾಜ್ ಪಲ್ಸರ್ ಎನ್‌ಎಸ್ 200 ಬೈಕ್ ಕಳುವಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆಂಜಿನೇಯ ಅಲಿಯಾಸ್ ಅಂಜಿ, ಕಾರ್ತಿಕ್ ಅಲಿಯಾಸ್ ಆಲೋಡ್ ಕಾರ್ತಿಕ್ ಹಾಗೂ ಆಕಾಶ ಅಲಿಯಾಸ್ ಕಮಲಾಪುರ ಆಕಾಶ ಅವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 11.29 ಲಕ್ಷ ಮೌಲ್ಯದ 15 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಪೊಲೀಸ್ ತಂಡದ ಕಾರ್ಯಕ್ಕೆ ಎಸ್ಪಿ ಅರುಣಾಂಗು ಗಿರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Edited By : Shivu K
PublicNext

PublicNext

16/06/2026 10:30 pm

Cinque Terre

11.92 K

Cinque Terre

0